- Advertisement -
- Advertisement -
ಕಾಪು: ಬಾರ್ ಗೆ ಬರುವವರಿಗೆ ತೊಂದರೆ ಆಗುತ್ತೆ ಅಂತ ಬಹುವರ್ಷದ ಮರವನ್ನ ಕಡಿದು ಹಾಕಿದ ಘಟನೆ ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದೆ. ಸಾವಿರಾರು ಹಕ್ಕಿಗಳು ವಾಸವಾಗಿದ್ದ ಈ ಮರವನ್ನು ನಿನ್ನೆ ಕಡಿದು ಹಾಕಿದ್ದಾರೆ.
ಈ ಮರದಲ್ಲಿ ಸಾವಿರಾರು ಹಕ್ಕಿಗಳು ವಾಸವಾಗಿದ್ದು ಹಕ್ಕಿಗಳ ಪಿಕ್ಕೆಗಳು ನೆಲಕ್ಕೆ ಬಿದ್ದು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮರವನ್ನು ಕಡಿಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಬಾರ್ ನಿರ್ಮಾಣವಾಗುವ ಮುನ್ನವೆ ಇದ್ದ ಈ ಮರವು ಸದ್ಯ ಸಾವಿರಾರು ಹಕ್ಕಿಗಳಿಗೆ ವಾಸಸ್ಥಾನ ಮತ್ತು ನೂರಾರು ಗೂಡುಗಳಿದ್ದವು. ಜೊತೆಗೆ ಅದರಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುವ ಮೊಟ್ಟೆಯೊಳಗಿನ ಮರಿಗಳಿದ್ದವು. ಆದರೇ ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತೆಂಬ ದೃಷ್ಟಿಯಿಂದ ಈ ಮರವನ್ನು ಕಡಿದು ಹಾಕಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯ ಆಕ್ರೋಶ ಹೊರಹಾಕಿದೆ.
- Advertisement -