Thursday, May 16, 2024
Homeಕರಾವಳಿಉಡುಪಿಕಾಪು: ಬಾರ್‌ ಗೆ ಬರುವವರಿಗೆ ತೊಂದರೆ ಆಗುತ್ತೆ ಅಂತ ಬೃಹತ್‌ ಮರವನ್ನೇ ಕಡಿದ ಭೂಪರು: ಸಾಮಾಜಿಕ...

ಕಾಪು: ಬಾರ್‌ ಗೆ ಬರುವವರಿಗೆ ತೊಂದರೆ ಆಗುತ್ತೆ ಅಂತ ಬೃಹತ್‌ ಮರವನ್ನೇ ಕಡಿದ ಭೂಪರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತ

spot_img
- Advertisement -
- Advertisement -

ಕಾಪು: ಬಾರ್‌ ಗೆ ಬರುವವರಿಗೆ ತೊಂದರೆ ಆಗುತ್ತೆ ಅಂತ ಬಹುವರ್ಷದ ಮರವನ್ನ ಕಡಿದು ಹಾಕಿದ ಘಟನೆ ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದೆ. ಸಾವಿರಾರು ಹಕ್ಕಿಗಳು ವಾಸವಾಗಿದ್ದ ಈ ಮರವನ್ನು ನಿನ್ನೆ ಕಡಿದು ಹಾಕಿದ್ದಾರೆ.

ಈ ಮರದಲ್ಲಿ ಸಾವಿರಾರು ಹಕ್ಕಿಗಳು ವಾಸವಾಗಿದ್ದು ಹಕ್ಕಿಗಳ ಪಿಕ್ಕೆಗಳು ನೆಲಕ್ಕೆ ಬಿದ್ದು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮರವನ್ನು ಕಡಿಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಬಾರ್ ನಿರ್ಮಾಣವಾಗುವ ಮುನ್ನವೆ ಇದ್ದ ಈ ಮರವು ಸದ್ಯ ಸಾವಿರಾರು ಹಕ್ಕಿಗಳಿಗೆ ವಾಸಸ್ಥಾನ ಮತ್ತು ನೂರಾರು ಗೂಡುಗಳಿದ್ದವು. ಜೊತೆಗೆ ಅದರಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುವ ಮೊಟ್ಟೆಯೊಳಗಿನ ಮರಿಗಳಿದ್ದವು. ಆದರೇ ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತೆಂಬ ದೃಷ್ಟಿಯಿಂದ ಈ ಮರವನ್ನು ಕಡಿದು ಹಾಕಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯ ಆಕ್ರೋಶ ಹೊರಹಾಕಿದೆ.

- Advertisement -
spot_img

Latest News

error: Content is protected !!