- Advertisement -
- Advertisement -
ಮಂಗಳೂರು: ಪೊಲೀಸರು ಕೇಸರಿ ಶಾಲು ಹಾಕಿದ್ದಕ್ಕೆ ಡಿಕೆಶಿ ಎಚ್ಚರಿಕೆ ನೀಡಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲಾ ಇಲಾಖೆಗಳಲ್ಲೂ ಸಾಂವಿಧಾನಿಕವಾಗಿ ಪ್ರತಿ ನಾಗರೀಕನಿಗೂ ಅವನ ಧರ್ಮದ ಅನಷ್ಠಾನದ ಹಕ್ಕಿದೆ. ಅದನ್ನ ತಡೆಯುವ ಕೆಲಸ ಕಾಂಗ್ರೆಸ್ನಿಂದ ಆಗ್ತಿದೆ. ಈ ಮೂಲಕ ಹಾಗೂ ಕಾಂಗ್ರೆಸ್ನ ಹೀನ ರಾಜಕಾರಣ ಬಹಿರಂಗಗೊಂಡಿದೆ.
ಯಾವುದೇ ವ್ಯಕ್ತಿಯ ಧಾರ್ಮಿಕ ಆಚರಣೆಗೆ ಸಾಂವಿಧಾನಿಕವಾಗಿ ಅಡ್ಡಿ ಮಾಡುವುದು ಸರಿಯಲ್ಲ. ಪೊಲೀಸರನ್ನ ಒಂದು ಪಾರ್ಟಿಗೆ ಸೀಮಿತ ಮಾಡುವ ಹೀನ ರಾಜಕಾರಣವನ್ನು ಕಾಂಗ್ರೆಸ್ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ರು.
- Advertisement -