Sunday, June 29, 2025
Homeಕರಾವಳಿಉಡುಪಿಉಡುಪಿಯಲ್ಲಿ ಆಭರಣ ಮಳಿಗೆಯಿಂದ ಚಿನ್ನದ ಬಳೆ ಕಳವು: ಮಹಾರಾಷ್ಟ್ರ ಮೂಲದ ಮೂವರ ಬಂಧನ !

ಉಡುಪಿಯಲ್ಲಿ ಆಭರಣ ಮಳಿಗೆಯಿಂದ ಚಿನ್ನದ ಬಳೆ ಕಳವು: ಮಹಾರಾಷ್ಟ್ರ ಮೂಲದ ಮೂವರ ಬಂಧನ !

spot_img
- Advertisement -
- Advertisement -

ಉಡುಪಿ: ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಶೋರೂಂನಿಂದ ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 23 ರಂದು ಬುರ್ಖಾ ಧರಿಸಿ ಬಂದಿದ್ದ ಇಬ್ಬರು ಮಹಿಳೆಯರು ಪುರುಷ ಮತ್ತು ಮಗುವಿನೊಂದಿಗೆ 3,00,000 ಮೌಲ್ಯದ 60 ಗ್ರಾಂನ ನಾಲ್ಕು ಚಿನ್ನದ ಬಳೆಗಳನ್ನು ಕದ್ದೊಯ್ದಿದ್ದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಟವೇರಾ ಕಾರ್ MH-13-AF-4599 ಅನ್ನು ಅಪರಾಧಕ್ಕೆ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೋಲಾಪುರದ ಜಿಂದಗಿ ಮೂಲದ ಆಸಿಫ್ ಅಶ್ಫಾಕ್ ಶೇಖ್ (32) ಮತ್ತು ನಾಜಿಯಾ ಆಸಿಫ್ ಶೇಕ್ (32) ಮತ್ತು ಸೋಲಾಪುರದ ಕುಂಬಾರವಿಲೇಜ್ ನಿವಾಸಿ ಸೌಧಗರ್ ದಿಲೀಪ್ ಗುಂಡೂಕರ್ (35) ಬಂಧಿತ ಆರೋಪಿಗಳು.

2,99,792 ಮೌಲ್ಯದ ಟವೇರಾ ಕಾರು, ಮೊಬೈಲ್ ಫೋನ್ ಮತ್ತು ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!