ಚೆನೈ: ಎಟಿಎಂನಿಂದ ಹಣ ಕದಿಯಲು ಮಾಡಿದ ಯತ್ನ ವಿಫಲವಾಗಿದ್ದರಿಂದ ಯಂತ್ರ ಮತ್ತು ಗೋಡೆಯ ನಡುವೆ ಸಿಲುಕಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.
ಎಮ್ ಉಪೇಂದ್ರ ರಾಯ್ ಎಂಬ 28 ವರ್ಷದ ವ್ಯಕ್ತಿ ಎಟಿಎಂ ಯಂತ್ರದಿಂದ ಹಣವನ್ನು ಕದಿಯಲು ಪ್ರಯತ್ನಿಸಿದ್ದಾನೆ . ಈ ವೇಳೆ ಯಂತ್ರದ ಒಳಗಡೆ ಆತನ ಕೈ ಸಿಲುಕಿ ಹಾಕಿಕೊಂಡಿದೆ. ರಾಯ್ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿಯಾಗಿರುವ ಈತ ನಾಮಕ್ಕಲ್ ಜಿಲ್ಲೆಯ ಪರಾಲಿಯಲ್ಲಿ ಕೋಳಿ ಆಹಾರ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಮದ್ಯದ ಅಮಲಿನಲ್ಲಿದ್ದ ರಾಯ್, ಎಟಿಎಂ ಯಂತ್ರದ ಹಿಂಭಾಗದಲ್ಲಿರುವ ಗೋಡೆಯಲ್ಲಿ ಅಂಟಿಕೊಂಡಿದ್ದ ಪ್ಲೈವುಡ್ ಅನ್ನು ತೆಗೆದು ಯಂತ್ರದ ಹಿಂಭಾಗವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾನೆ .ಆದರೆ, ಅವನು ಯಂತ್ರವನ್ನು ಒಡೆಯಲು ಪ್ರಯತ್ನಿಸಿದಾಗ, ಹತ್ತಿರದ ನಿವಾಸಿಗಳಿಗೆ ಶಬ್ದ ಕೇಳಿದೆ. ಕೂಡಲೇ ಅವರು ಮೋಹನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಗೋಡೆಯ ಮತ್ತು ಎಟಿಎಂ ಯಂತ್ರದ ನಡುವೆ ಸಿಲುಕಿಕೊಂಡಿದ್ದ ಆತನನ್ನು ರಕ್ಷಿಸಿ ಬಂಧಿಸಿದ್ದಾರೆ. ಮರುದಿನ, ರಾಯನನ್ನು ನ್ಯಾಯಾಂಗ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆತ ಪ್ರಸ್ತುತ ನಾಮಕ್ಕಲ್ ಉಪ ಕಾರಾಗೃಹದಲ್ಲಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ