- Advertisement -
- Advertisement -
ಬೆಂಗಳೂರು: ಕಿರುತೆರೆ ನಟ ಚಂದನ್ ಕುಮಾರ್ ಅವರ ಬಿರಿಯಾನಿ ಹೋಟೆಲ್ನಲ್ಲಿ ಕಳ್ಳತನವಾಗಿದೆ.
ಚಂದನ್ ಕುಮಾರ್ ನಟನೆಯ ಜೊತೆ ಉದ್ಯಮ ಕ್ಷೇತ್ರದಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇನ್ನು ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ನಿನ್ನೆ ರಾತ್ರಿ ಈ ಹೋಟೆಲ್ನಲ್ಲಿ ಕಳ್ಳತನ ಆಗಿದೆ. ನಿನ್ನೆ ತಡರಾತ್ರಿ ನಟ ಚಂದನ್ ದೊನ್ನೆ ಬಿರಿಯಾನಿ ಹೋಟೆಲ್ ಸೇರಿ ನಾಲ್ಕೈದು ಅಂಗಡಿಗಳಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಖದೀಮರ ದುಷ್ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಈ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಚಂದನ್ ಕುಮಾರ್ ದೂರು ದಾಖಲಿಸಿದ್ದಾರೆ.
- Advertisement -