Friday, June 27, 2025
Homeಕರಾವಳಿಸತ್ಯಜಿತ್ ಸುರತ್ಕಲ್ ಗೆ  ನೀಡಲಾಗಿದ್ದ ಭದ್ರತೆಯನ್ನು ವಾಪಾಸ್ ಪಡೆದ ರಾಜ್ಯ ಸರ್ಕಾರ

ಸತ್ಯಜಿತ್ ಸುರತ್ಕಲ್ ಗೆ  ನೀಡಲಾಗಿದ್ದ ಭದ್ರತೆಯನ್ನು ವಾಪಾಸ್ ಪಡೆದ ರಾಜ್ಯ ಸರ್ಕಾರ

spot_img
- Advertisement -
- Advertisement -

ಮಂಗಳೂರು: ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಸತ್ಯಜಿತ್ ಸುರತ್ಕಲ್ ಅವರಿಗೆ ಸರ್ಕಾರ ನೀಡಿದ್ದ ಪೊಲೀಸ್ ಭದ್ರತೆಯನ್ನು ವಾಪಾಸ್ ಪಡೆದಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಅಧಿಕಾರಿಗಳಿಂದ ಈಗಾಗಲೇ ಸತ್ಯಜಿತ್ ಅವರಿಗೆ ತಿಳುವಳಿಕೆ ಪತ್ರ ರವಾನೆ ಮಾಡಲಾಗಿದ್ದು ಅದರಲ್ಲಿ ಸರ್ಕಾರಿ ವೆಚ್ಚದಲ್ಲಿ ಇನ್ಮುಂದೆ ಭದ್ರತೆ ನೀಡಲಾಗುವುದಿಲ್ಲ ಭದ್ರತೆ ಬೇಕಾದಲ್ಲಿ ಹಣ ಪಾವತಿಸಿ ಪಡೆಯಬೇಕೆಂದು ಸೂಚಿಸಲಾಗಿದೆ.

ಇನ್ನು ಇದಕ್ಕೆ ಪ್ರತಿಯಾಗಿ ಸತ್ಯಜೀತ್ ಸುರತ್ಕಲ್ ಅವರು ಮಂಗಳೂರು ಪೊಲೀಸ್ ಉಪ ಆಯುಕ್ತರಿಗೆ ಪತ್ರ ಬರೆದಿದ್ದು, ಹಣ ಪಾವತಿ ಮಾಡಿ ಭದ್ರತೆ ಇಡುವಷ್ಟು ಶಶಕ್ತನಾಗಿಲ್ಲ .ಆದ್ರೆ ಈಗಲೂ ಮುಸ್ಲೀಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದ್ದು ಸರ್ಕಾರಿ ಭದ್ರತೆಯನ್ನು ಮುಂದುವರಿಸಬೇಕೆಂದು ಕೋರಿದ್ದಾರೆ. ಅಯೋಧ್ಯೆ ಬಾಬರಿ ಮಸೀದಿ ಪ್ರಕರಣ, ಹುಬ್ಬಳ್ಳಿ ಈದ್ಗಾ ಮೈದಾನಿನಲ್ಲಿ ಧ್ವಜ ಹಾರಿಸಿ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರಿಂದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಈ ಹಿಂದಿನ ಸರ್ಕಾರಗಳು ಅವರ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇದೀಗ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ

- Advertisement -
spot_img

Latest News

error: Content is protected !!