ಶಿವಮೊಗ್ಗ: ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ಆರೆಸ್ಸೆಸ್ ಕಟ್ಟದೇ ಇದ್ದರೆ ಇಂದು ಮುಸ್ಲಿಮರಿಂದ ದೇಶ ಉಳಿಯುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಶಿವಮೊಗ್ಗ ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದರು.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕದಿಂದ ಭಗತ್ ಸಿಂಗ್, ನಾರಾಯಣ ಗುರು ಪಾಠವನ್ನು ತೆಗೆದರು ಎಂದು ಕಾಂಗ್ರೆಸ್ ಮುಖಂಡರು ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಅವರು ಪಠ್ಯ ಪುಸ್ತಕವನ್ನ ನೋಡಿದ್ದಾರಾ? ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸುಳ್ಳು ಹೇಳ್ತಾ ಇದ್ದಾರೆ. ಯಾವ ಕಾರಣಕ್ಕೂ ಇಬ್ಬರ ಹೆಸರನ್ನ ಪಠ್ಯದಿಂದ ತೆಗೆಯುವುದಿಲ್ಲ ಎಂದು ಅವರು ಹೇಳಿದರು.
ಪಠ್ಯ ಪುಸ್ತಕದಲ್ಲಿ ಕೇಶವ್ ಹೆಡ್ಗೆವಾರ್ರ ರಾಷ್ಟ್ರಭಕ್ತಿ ವಿಚಾರವನ್ನೂ ಸಹ ಹಾಕುತ್ತಿದ್ದೇವೆ. 1925 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಗದೇ ಇದ್ದಿದ್ದರೆ ಈ ದೇಶ ಯಾವ ಸ್ಥಿತಿಯಲ್ಲಿರ್ತಿತ್ತು ಲೆಕ್ಕ ಹಾಕಿ. ಎಲ್ಲಿ ಬೇಕೋ ಅಲ್ಲಿ ಕೆಲವು ಮುಸಲ್ಮಾನರು ದಂಗೆ ಎಬ್ಬಿಸುವ ಕೆಲಸ ಮಾಡ್ತಿದ್ದರು. ಮುಸಲ್ಮಾನರು ದಂಗೆ, ಗೂಂಡಾಗಿರಿ ಎಬ್ಬಿಸೋದಕ್ಕಾಗಿ ಸ್ವಾತಂತ್ರ ಬಂದಿಲ್ಲ. ಹಿಂದೂ ಸಮಾಜ ರಕ್ಷಣೆ, ಉದ್ದಾರ ಮಾಡಬೇಕು ಎಂದು ಸ್ವಾತಂತ್ರ ಬಂದಿದೆ. ಮುಸಲ್ಮಾನರಿಗೆ ಪಾಕಿಸ್ತಾನ ಹೋಯ್ತು. ಆದರೂ ಭಾರತದಲ್ಲಿ ಮುಸ್ಲಿಮರಿಗೆ ಕೋಮು ಸೌಹಾರ್ದಯುತವಾಗಿ ನಡೆಸಿಕೊಂಡು ಬಂದಿದ್ದೇವೆ. ವಿಶ್ವದಲ್ಲಿ ಎಲ್ಲಿಯೂ ಇಂತಹ ವ್ಯವಸ್ಥೆ ಇಲ್ಲ ಎಂದರು.
ಮುಸ್ಲಿಮರೇ ಇರುವ ಪಾಕಿಸ್ತಾನದಲ್ಲಿ ಬಾಂಗ್ಲಾದಲ್ಲಿ ಅವರವರೇ ಶಿಯಾ-ಸುನ್ನಿ ಹೆಸರಲ್ಲಿ ಬಡಿದಾಡಿ ಸಾಯ್ತಾ ಇದ್ದಾರೆ. ಭಾರತದಲ್ಲಿ ಮುಸ್ಲಿಮರು ಬಡಿದಾಡುತ್ತಿದ್ದಾರೆ. ಇಲ್ಲಿ ಮುಸ್ಲಿಮರು ದಬ್ಬಾಳಿಕೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ್ ಸಂಘವನ್ನ ಹೆಡೆವಾರ್ ಸ್ಥಾಪಿಸದೇ ಇದ್ದಿದ್ದರೆ ಹಿಂದೂಗಳಾದ ನಾವು ಬಲಹೀನರಾಗಿ ಮೊಘಲರ ಕಾಲದಲ್ಲಿ ಹೇಗಿದ್ದೋ ಹಾಗೆ ಬದುಕಬೇಕಿತ್ತು. ರಾಷ್ಟ್ರೀಯ ಚಿಂತನೆಗಳನ್ನಿಟ್ಟುಕೊಂಡ ಹೆಡ್ಲೆವಾರ್ರನ್ನ ಪಠ್ಯದಲ್ಲಿ ಸೇರಿಸಿದ್ರೆ ಕಾಂಗ್ರೆಸ್ ನಾಯಕರಿಗೇಕೆ ಹೊಟ್ಟೆ ಉರಿ? ಏನು ತೊಂದರೆ? ವ್ಯಕ್ತಿತ್ವ ನೋಡಬೇಕಾ ಅಥವಾ ವ್ಯಕ್ತಿ ಪೂಜೆ ಮಾಡಬೇಕಾ? ಸಿದ್ದರಾಮಯ್ಯ ಪೂರ್ವಜರಾದ ಇಂದಿರಾ ಗಾಂಧಿ ಹಾಗೂ ನೆಹರೂ ಆರ್ಎಸ್ಎಸ್ನ್ನೇ ಬ್ಯಾನ್ ಮಾಡಬೇಕು ಎಂದು ಚಿಂತಿಸಿದರು. ಅವರ ಕೈಯಲ್ಲೇ ಆಗದೇ ಇರೋದು ಇವರ ಕೈಯಲ್ಲಿ ಏನು ಆಗುತ್ತೆ ಎಂದು ಪ್ರಶ್ನೆ ಮಾಡಿದರು.