- Advertisement -
- Advertisement -
ಉಡುಪಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸರಸರನೇ ಹಲಸಿನ ಮರ ಏರಿ ಹಣ್ಣುಗಳನ್ನು ಕೊಯ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀಗಳು ಗೋಶಾಲೆಗೆ ಭೇಟಿ ನೀಡಿದ ವೇಳೆ ಗೋಶಾಲೆಯ ಆವರಣದಲ್ಲಿರುವ ಹಲಸಿನ ಮರವನ್ನು ಏರಿ ಹಣ್ಣು ಕೊಯ್ದಿದ್ದಾರೆ. ಬಳಿಕ ಹಲಸಿನ ಹಣ್ಣುಗಳನ್ನು ಗೋವುಗಳಿಗೆ ನೀಡಿದ್ದಾರೆ. ಶ್ರೀಗಳ ಈ ಫೋಟೋಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
- Advertisement -