- Advertisement -
- Advertisement -
ಮಂಗಳೂರು: ಈರುಳ್ಳಿ ದರ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, 100 ರೂಪಾಯಿ ಗಡಿ ದಾಟತೊಡಗಿದೆ. ಬೇಡಿಕೆ ಹೆಚ್ಚಾಗಿದ್ದು ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ಪೂರೈಕೆ ಬಹಳಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿಯೇ ದರ ಏರುತ್ತಿದೆ ಎನ್ನಲಾಗುತ್ತಿದ್ದು,
ಭಾರಿ ಮಳೆ, ನೆರೆಹಾನಿಯ ಕಾರಣ ಹೊಲದಲ್ಲಿಯೇ ಬೆಳೆ ಹಾಳಾಗಿದೆ. ಸ್ವಲ್ಪ ಪ್ರಮಾಣದ ಈರುಳ್ಳಿ ಕೈಗೆ ಸಿಕ್ಕಿದ್ದು ರೈತರು ಅದನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಎಪಿಎಂಸಿಗೆ ಈರುಳ್ಳಿ ಮಾರಾಟಕ್ಕೆ ಬರುತ್ತಿಲ್ಲ. ಹೊರಗಿನಿಂದಲೂ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಈರುಳ್ಳಿ ದರ ಏರಿಕೆಯಾಗತೊಡಗಿದೆ ಎಂದು ಹೇಳಲಾಗಿದೆ.
- Advertisement -