- Advertisement -
- Advertisement -
ಸುಬ್ರಹ್ಮಣ್ಯ: ದುಷ್ಕರ್ಮಿಗಳು ದನದ ತಲೆ ಕಡಿದು ತಲೆಯ ಭಾಗವನ್ನು ನೀರಿಗೆ ಎಸೆದು ವಿಕೃತಿ ಮೆರೆದ ಘಟನೆ ಐನೆಕಿದು ಗ್ರಾಮದ ಕೊಪ್ಪಲಗದ್ದೆ ಸೇತುವೆ ಬಳಿ ಕಂಡುಬಂದಿದೆ. ಗೋಣಿ ಚೀಲದಲ್ಲಿ ಕಟ್ಟಿದ ದನದ ರುಂಡ ಅ.3 ರಂದು ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ದನದ ತಲೆ ಕಡಿದು ತಲೆಯ ಭಾಗವನ್ನು ಇಲ್ಲಿ ಬಿಸಾಡಿ ಹೋಗಿದ್ದಾರೆ.
ಸುಬ್ರಹ್ಮಣ್ಯ ಠಾಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
- Advertisement -