- Advertisement -
- Advertisement -
ಕಾಸರಗೋಡು: ಪರಾರಿಯಾಗಲು ಯತ್ನಿಸಿದ್ದ ಕಳವು ಪ್ರಕರಣದ ಆರೋಪಿಯನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬದಿಯಡ್ಕ ಪಂಜಿಕಲ್ ಉಕ್ಕಾಸ್ ಬಶೀರ್ (55) ಬಂಧಿತ ಆರೋಪಿ.
ಈತ ಆಗಸ್ಟ್ 20ರಂದು ಬೇಕಲ ಕೋಟೆ ಗುಡ್ಡೆಯಲ್ಲಿ ಅಬ್ದುಲ್ ರಹ್ಮಾನ್ ಎಂಬುವರ ಮನೆಗೆ ನುಗ್ಗಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ. ಬದಿಯಡ್ಕದಲ್ಲಿರುವ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
- Advertisement -