- Advertisement -
- Advertisement -
ಉಡುಪಿ: ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ನಗರಸಭೆಗೆ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ನಾನೂ ಕೂಡಾ ನಗರಸಭೆಗೆ ಪತ್ರ ಬರೆದಿದ್ದೇನೆ. ಇದೀಗ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡುವುದು ಅಷ್ಟು ಸಮಂಜಸವಲ್ಲ ಎಂದಿದ್ದಾರೆ. .
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಪ್ರತಿಮೆಗೆ ಏನಾದ್ರೂ ಧಕ್ಕೆಯಾದ್ರೆ ಅದನ್ನ ನಿರ್ವಹಿಸುವುದು ಕಷ್ಟವಾಗುತ್ತೆ. ಅದಕ್ಕೆ ನಗರದ ಹಳೆ ತಾಲೂಕು ಆಫೀಸ್ ಸರ್ಕಲ್ ಗೆ ಸಾವರ್ಕರ್ ವೃತ್ತ ಎಂದು ನಾಮಕರಣ ಮಾಡುತ್ತೇವೆ ಎಂದು ಹೇಳಿದ್ದಾರೆ.
- Advertisement -