Thursday, April 25, 2024
Homeಕರಾವಳಿನಾಗಬನ ಧ್ವಂಸ ಮಾಡಲು 10,000/- ಡೀಲ್ ಒಪ್ಪಿಕೊಂಡಿದ್ದ ಖದೀಮರು !

ನಾಗಬನ ಧ್ವಂಸ ಮಾಡಲು 10,000/- ಡೀಲ್ ಒಪ್ಪಿಕೊಂಡಿದ್ದ ಖದೀಮರು !

spot_img
- Advertisement -
- Advertisement -

ಮಂಗಳೂರಿನಲ್ಲಿ ನಾಗಬನ ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೆಲವರು ಬಂಧನ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಒಂದು ಪ್ರಕರಣದಲ್ಲಿ ಆಶ್ಚರ್ಯ ಸಂಗತಿಯೊಂದು ಕೂಡಿತ್ತು ಅದೇನೆಂದರೆ ಎಂಟು ಜನರು ನಾಗಬನ ವನ್ನು ಧ್ವಂಸಗೊಳಿಸಲು ಕೇವಲ ಹತ್ತು ಸಾವಿರ ರೂಪಾಯಿಗೆ ಡೀಲ್ ಒಪ್ಪಿಕೊಂಡಿದ್ದರು. ತನಿಖೆಯ ವೇಳೆ ಈ ವಿಷಯ ಬಯಲಾಗಿದೆ.

ಅದಾಗಲೇ ಆರೋಪಿಗಳಾದ ಇರ್ಷಾದ್‌ ಮತ್ತು ಅಚ್ಚಿ ಜಾಮೀನಿನ ಮೇಲೆ ಹೊರಬಂದಿರುತ್ತಾರೆ. ಮಂಗಳೂರಿನಲ್ಲಿ ಸರಗಳ್ಳತನಕ್ಕೆ ಪೊಲೀಸರು ಬಲೆ ಬೀಸುತ್ತಿದ್ದರು. ಅವರಿಗೆ ಅಪರಾಧ ನಡೆಸಲು ಬಹಳ ಕಷ್ಟವಾಗುತ್ತದೆ.

ಈ ನಾಗಬನದ ಅಪವಿತ್ರದ ನಿರ್ಧಾರಕ್ಕೆ ಬರುತ್ತಾರೆ. ಈ ವೇಳೆ ಅಲ್ಲೇ ತುಂಬಾ ಪರಿಚಯವಿದ್ದ ಪ್ರವೀಣ್‌ಗೆ ಈ ಡೀಲ್‌ ವಹಿಸುತ್ತಾರೆ. ಹಾಗಾಗಿ ಇವರು ಈ ಕೃತ್ಯವೆಸಗಲು ಮುಂದಾಗಿದ್ದರು.

ಇವರಲ್ಲಿ 2 ಗುಂಪುಗಳಾಗಿ 5000/- ಅಡ್ವಾನ್ಸ್ ಸ್ಥಳದಲ್ಲಿ ನೀಡಿದ್ದರು. ಎಲ್ಲರೂ ಒಟ್ಟಾಗಿ ಈ ನಾಗಬನವನ್ನು ಅಪವಿತ್ರ ಗೊಳಿಸಿದ್ದಾರೆ. ಮೊದಲ ಭಾಗವಾಗಿ ಕೂಳೂರು ನಾಗ ಬನವನ್ನು ಧ್ವಂಸಗೊಳಿಸಿದ ಇವರು ಎರಡನೇ ಬಾರಿ ಕೋಡಿಕಲ್ ನಾಗಬನಕ್ಕೆ ಟಾರ್ಗೆಟ್ ಇಡುತ್ತಾರೆ.

ಪ್ರತಿನಿತ್ಯ ನಾಗಬನಕ್ಕೆ ಯಾರೂ ಹೋಗುವುದಿಲ್ಲ ಇದನ್ನೇ ಬಂಡವಾಳ ಮಾಡಿಕೊಂಡು ನಾಗಬನಕ್ಕೆ ಟಾರ್ಗೆಟ್‌ ಇಟ್ಟಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!