Tuesday, May 14, 2024
Homeಕರಾವಳಿಉಡುಪಿಉಡುಪಿ: ಜೊತೆಯಾಗಿ ಬದುಕಬೇಕಾದವರು, ಒಂದೇ ಚಿತೆಯಲ್ಲಿ ಬೂದಿಯಾದರು: ಸುಟ್ಟು ಕರಕಲಾದರೂ ಒಬ್ಬರಿಗೊಬ್ಬರು ಅಂಟಿಕೊಂಡಿದ್ದರು: ಯುವಜೋಡಿಯ ಆತ್ಮಹತ್ಯೆ...

ಉಡುಪಿ: ಜೊತೆಯಾಗಿ ಬದುಕಬೇಕಾದವರು, ಒಂದೇ ಚಿತೆಯಲ್ಲಿ ಬೂದಿಯಾದರು: ಸುಟ್ಟು ಕರಕಲಾದರೂ ಒಬ್ಬರಿಗೊಬ್ಬರು ಅಂಟಿಕೊಂಡಿದ್ದರು: ಯುವಜೋಡಿಯ ಆತ್ಮಹತ್ಯೆ ಬಗ್ಗೆ ಮನೆಯವರು ಹೇಳಿದ್ದೇನು ಗೊತ್ತಾ?

spot_img
- Advertisement -
- Advertisement -

ಉಡುಪಿ: ಕಾರಿನೊಳಗೆ ಕೂತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಯುವಜೋಡಿಯ ಅಂತ್ಯಸಂಸ್ಕಾರ ಉಡುಪಿಯಲ್ಲೇ ನಡೆದಿದೆ. ಒಟ್ಟಿಗೆ ಬದುಕಲು ಸಾಧ್ಯವಾಗದಿದ್ದರೂ ಈ ಯುವಜೋಡಿಯನ್ನು ಒಂದೇ ಚಿತೆಯಲ್ಲಿಟ್ಟು ಸುಡಲಾಗಿದೆ. ಘಟನಾ ಸ್ಥಳದಲ್ಲೇ ಶವ ಸಂಪೂರ್ಣ ಸುಟ್ಟು ಹೋಗಿತ್ತು. ಆದರೆ ಶಾಸ್ತ್ರ ಪ್ರಕಾರ ಅಂತಿಮ ಸಂಸ್ಕಾರ ನಡೆಸಲೇಬೇಕು.‌ ಹಾಗಾಗಿ ಸುಟ್ಟು ಕರಕಲಾದ ಶವವನ್ನು ಬೆಂಗಳೂರಿಗೆ ಕೊಂಡೊಯ್ಯುವ ಬದಲಾಗಿ ಉಡುಪಿಯಲ್ಲೇ ಸಂಸ್ಕಾರ ಮಾಡಲು ಎರಡು ಕುಟುಂಬಿಕರು ತೀರ್ಮಾನ ನಡೆಸಿದ್ದರು. ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಮಣಿಪಾಲದಿಂದ ಸ್ವಲ್ಪವೇ ದೂರದಲ್ಲಿರುವ ಇಂದ್ರಾಳಿ ಸ್ಮಶಾನದಲ್ಲಿ, ಅಂತಿಮ ಸಂಸ್ಕಾರ ನಡೆಸಲಾಯಿತು.

ಶವ ಪತ್ತೆಯಾದಾಗಲೂ ಈ ಯುವಜೋಡಿ ಕಾರಿನ ಹಿಂದಿನ ಸೀಟಿನಲ್ಲಿ ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸುಟ್ಟು ಕರಕಲಾದರೂ ಒಬ್ಬರಿಗೊಬ್ಬರು ಅಂಟಿಕೊಂಡಿದ್ದರು. ಕೊನೆಗೆ ಅಂತಿಮ ಸಂಸ್ಕಾರವನ್ನು ಕೂಡ, ಒಂದೇ ಚಿತೆಯಲ್ಲಿ ನಡೆಸಲಾಯಿತು. ಎರಡು ದೇಹಗಳನ್ನು ಒಂದೇ ಚಿತೆಯಲ್ಲಿಟ್ಟು ಸುಡಲಾಯಿತು. ಬಳಿಕ ಬೂದಿಯನ್ನು ಎರಡು ಕುಟುಂಬಗಳು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯವರು ವಿರೋಧಿಸಿದರೆಂದು ಯುವಜೋಡಿ ಆತ್ಮಹತ್ಯೆ ಮಾಡಿಕೊಂಡಿತ್ತು. ಕೊನೆಯದಾಗಿ ಕಳಿಸಿದ್ದ ವಾಟ್ಸಪ್ ಮೆಸೇಜ್ ನಲ್ಲಿ ಇದೆ ವಿಚಾರ ಬರೆಯಲಾಗಿತ್ತು. ಮನೆಯವರನ್ನು ಬಿಟ್ಟಿರೋದು ಸಾಧ್ಯವಿಲ್ಲ ನಾವಿಬ್ಬರೂ ಬೇರೆ ಆಗುವುದಿಲ್ಲ, ಹಾಗಾಗಿ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದೇವೆ ಕ್ಷಮಿಸಿ ಎಂದು ಬರೆಯಲಾಗಿತ್ತು. ಆದರೆ ಈ ಯುವಜೋಡಿಗಳ ಎರಡು ಕುಟುಂಬದವರು ಹೇಳುವುದೇ ಬೇರೆ.

ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ ಎಂದು ಜ್ಯೋತಿಯ ಮನೆಯವರು ಹೇಳುತ್ತಾರೆ.ಪ್ರೀತಿ ವಿಷಯ ಪ್ರಸ್ತಾಪ ಮಾಡಿದಿದ್ದರೆ ಕೂತು ಮಾತಾಡಿ ಮದುವೆ ಆದರೂ ಮಾಡಿಸ್ತಾಯಿದ್ದೆವು. ಹಣ ಖಾಲಿಯಾಗುವವರೆಗೆ ಸುತ್ತಾಡಿ ಕೈಯಲ್ಲಿ ಹಣ ಇಲ್ಲದಿದ್ದಾಗ ಬದುಕುವ ಧೈರ್ಯ ಇಲ್ಲದೇ ಹೀಗೆ ಮಾಡಿಕೊಂಡಿದ್ದಾರೆ. ಕಷ್ಟ ಪಟ್ಟು ದುಡಿದು ಸಾಕುವ ತಾಕತ್ತು ಇಲ್ಲದ ಮೇಲೆ ಪ್ರೀತಿ ಮಾಡಿ ಏಕೆ ಓಡಿಹೋಗಬೇಕಿತ್ತು? ಎಂದು ಬೇಸರದ ಮಾತನಾಡಿದ್ದಾರೆ.ಪ್ರೀತಿ ಮಾಡಿ ಹುಡುಗಿಯನ್ನ ಕರೆದುಕೊಂಡು ಹೋಗಿ ಶೋಕಿ ಮಾಡಬಾರದು.ಕೂಲಿ ನಾಲಿ ಮಾಡಿ ಹುಡುಗಿಯನ್ನು ಸಾಕಬೇಕು. ಭಯಬಿದ್ದು ಜೀವ ತೆಗೆದುಕೊಳ್ಳೋದು ತುಂಬಾ ‌ತಪ್ಪು. ಹುಡುಗಿ ಬಿಕಾಂ ಓದಿದ್ದಾಳೆ ಬುದ್ದಿವಂತೆ ಕೂಡ ಆದರೆ ಭಯದ ಸ್ವಭಾವ.ಎರಡು ವರ್ಷದಿಂದ ಮನೆಯಲ್ಲೇ ಇದ್ಲು ಎಲ್ಲೂ ಆಚೆ ಹೋಗ್ತಿರಲಿಲ್ಲ.ಅದ್ಹೇಗೆ ಈ ಹುಡುಗನೊಂದಿಗೆ ಸಂಪರ್ಕ ಆಯಿತು ಗೊತ್ತಿಲ್ಲ ಎನ್ನುತ್ತಾರೆ.

ಬುಧವಾರ ಬೆಳಗ್ಗೆ ೧೧.೩೦ಕ್ಕೆ ಇಂಟರ್ ವ್ಯೂ ಹೇಳಿ ಹೊರಗೆ ಹೋದ ಮನೆ ಮಗಳು ಸಂಜೆ ವರೆಗೂ ಬಂದಿಲ್ಲ.ಮರು ದಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಭಾನುವಾರ ಮುಂಜಾನೆ ೩ಗಂಟೆ ಸುಮಾರಿಗೆ ಈ ಆತ್ಮಹತ್ಯೆ ಗಮನಕ್ಕೆ ಬಂದಿದೆ. ಮಂಗಳೂರಿನಲ್ಲಿ ೧೨ ಸಾವಿರಕ್ಕೆ ಬಾಡಿಗೆ ಮನೆಯಲ್ಲೂ ಇದ್ದಿದ್ದಾರೆ. ತದನಂತರ ಸುತ್ತಾಡಲು ಹೋಗಿ ಹಣ ಖಾಲಿಯಾದ ಮೇಲೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು ೨೦ ರಿಂದ ೩೦ ಸಾವಿರ ಹಣ ಖರ್ಚು ಮಾಡಿ ಹಣ ಖಾಲಿಯಾಗಿದೆ. ಮನೆಯವರಿಗೂ ಈ ಬಗ್ಗೆ ಲೊಕೇಶನ್ ಸಹಿತ ಮೆಸೆಜ್ ರವಾನಿಸಿದ್ದಾರೆ.ಹುಡುಗ ಹುಡುಗಿ ಇಬ್ಬರದ್ದು ತಪ್ಪಿದೆ ಈ ತಪ್ಪಿನಿಂದ ಈ ಅನಾಹುತ ‌ನಡೆದಿದೆ ಎನ್ನುತ್ತಾರೆ.

ಮೃತ ಯಶವಂತ್ ತಂದೆ ವೆಂಕಟರಾವ್ ಮಗ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಎಂದುಕೋಂಡಿರಲೇ ಇರಲಿಲ್ಲ ಎನ್ನುತ್ತಾರೆ. ನನ್ನಮಗ ತುಂಬ ಮುಗ್ಧ ಸ್ವಭಾವದವನು ಈಗ ಈ ನಿರ್ಧಾರಕ್ಕೆ ಬಂದು ಅನಾಹುತ ಮಾಡಿಕೊಂಡಿದ್ದಾನೆ.ಬುಧವಾರ ಮಧ್ಯಾಹ್ನ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಕಂಪ್ಯೂಟರ್ ತರಗತಿಗೆ ಎಂದು ಹೋಗಿದ್ದಾನೆ.ಆ ಬಳಿಕ ಮೊಬೈಕ್ ಸ್ವಿಚ್ ಆಫ್ ಮಾಡಿದವ ಈವರೆಗೂ ಆನ್ ಮಾಡಿಲ್ಲ.ಬೇರೆಯವರ ಮೊಬೈಲ್ ನಿಂದ ೩ ಗಂಟೆ ಏಳು ನಿಮಿಷಕ್ಕೆ ಲಾಸ್ಟ್ ಮೆಸೆಜ್ ಮಾಡಿದ್ದಾನೆ. ಪ್ರೀತಿಯ ಬಗ್ಗೆ ಈವರೆಗೂ ನಮಗೆ ಗೊತ್ತೇ ಇಲ್ಲ ಈ ಮೊದಲು ಮನೆಯಲ್ಲೂ ಹೇಳಿಕೊಂಡಿಲ್ಲ. ಆದರೆ ಈ ಘಟನೆ ಬಳಿಕ ನಮಗೆ ಶಾಕ್ ಆಗಿದೆ. ಪ್ರೀತಿ ಬಗ್ಗೆ ಹೇಳಿದ್ದರೆ ನಾವೇ ಮದುವೆ ಮಾಡಿ ಕೊಡುತ್ತಿದ್ದೆವು.ಈ ಕೆಟ್ಟ ನಿರ್ಧಾರಕ್ಕೆ ಬರುವ ಮೊದಲು ಹೆತ್ತವರಿಗೆ ಕರೆ ಮಾಡಬಹುದಿತ್ತು ಎಂದು ಹೇಳುತ್ತಾರೆ.

- Advertisement -
spot_img

Latest News

error: Content is protected !!