Monday, May 20, 2024
Homeಕರಾವಳಿಲೋಕಸಭೆಯ ಕಲಾಪದ ಕನ್ನಡ ಅನುವಾದಕರಾಗಿ ಸುಬ್ರಮಣ್ಯದ ಡಾ| ಗೋವಿಂದ ಎನ್.ಎಸ್. ನೇಮಕ

ಲೋಕಸಭೆಯ ಕಲಾಪದ ಕನ್ನಡ ಅನುವಾದಕರಾಗಿ ಸುಬ್ರಮಣ್ಯದ ಡಾ| ಗೋವಿಂದ ಎನ್.ಎಸ್. ನೇಮಕ

spot_img
- Advertisement -
- Advertisement -

 ಸುಬ್ರಮಣ್ಯ; ಲೋಕಸಭೆಯ ಕಲಾಪದ ಕನ್ನಡ ಅನುವಾದಕರಾಗಿ ಸುಬ್ರಮಣ್ಯದ ಡಾ| ಗೋವಿಂದ ಎನ್.ಎಸ್. ನೇಮಕವಾಗಿದ್ದಾರೆ. ಲೋಕಸಭೆಯ ಕಲಾಪದಲ್ಲಿ ಆಗುವ ಚರ್ಚೆಗಳನ್ನು ಆಂಗ್ಲ ಹಾಗೂ ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕನ್ಸಲ್ಟಂಟ್ ಇಂಟಪ್ರಿಟರ್ ಹುದ್ದೆಗೆ ಸುಬ್ರಹ್ಮಣ್ಯ ಸಮೀಪದ ಹರಿಹರ ಪಲ್ಲತ್ತಡ್ಕ ಗ್ರಾಮದ ಗುಂಡಿಹಿತ್ಲುವಿನ ಡಾ| ಗೋವಿಂದ ಎನ್.ಎಸ್. ಆಯ್ಕೆಯಾಗಿದ್ದಾರೆ.

ಲೋಕಸಭೆಯ ಅಧಿವೇಶನದಲ್ಲಿನ ಕಾರ್ಯಕಲಾಪಗಳನ್ನು ಭಾರತೀಯ ವ್ಯವಸ್ಥೆಗೆ ಭಾಷಾಂತರಿಸುವ ಸಲುವಾಗಿ ಹೊಸ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲಾ ಭಾಷೆಗಳಲ್ಲೂ ತಲಾ 5 ಕನ್ಸಲ್ಟಂಟ್ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಕನ್ನಡಕ್ಕೆ ಭಾಷಾಂತರ ಹುದ್ದೆಗೆ 15 ಮಂದಿ ಅರ್ಜಿ ಸಲ್ಲಿಸಿದ್ದು, 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ನಾಲ್ವರು ನೇಮಕಗೊಂಡಿದ್ದಾರೆ. ಅವರಲ್ಲಿ ಮೂವರು ದಿಲ್ಲಿಯ ಕನ್ನಡಿಗರಾಗಿದ್ದು, ಗೋವಿಂದ ಎನ್.ಎಸ್. ಕರ್ನಾಟಕ(ದಕ್ಷಿಣ ಕನ್ನಡ) ದವರಾಗಿದ್ದಾರೆ. ಈ ಮೊದಲೇ ಒರ್ವರು ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇವರು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ  ಮಹಾವಿದ್ಯಾಲಯದಲ್ಲಿ ಆಂಗ್ಲ ಉಪನ್ಯಾಸಕರಾಗಿ ದುಡಿದು ಪ್ರಾಂಶುಪಾಲರಾಗಿ ನೇಮಕಗೊಂಡು ನಿವೃತ್ತರಾಗಿದ್ದರು.

- Advertisement -
spot_img

Latest News

error: Content is protected !!