Sunday, June 29, 2025
Homeಅಪರಾಧವಿದ್ಯಾರ್ಥಿಯನ್ನು ಗೋ ಕಳ್ಳಸಾಗಣೆದಾರನೆಂದು ಭಾವಿಸಿ 25 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ

ವಿದ್ಯಾರ್ಥಿಯನ್ನು ಗೋ ಕಳ್ಳಸಾಗಣೆದಾರನೆಂದು ಭಾವಿಸಿ 25 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ

spot_img
- Advertisement -
- Advertisement -

ಹರ್ಯಾಣ: ಪಿಯುಸಿ ವಿದ್ಯಾರ್ಥಿಯನ್ನು ತಂಡವೊಂದು ದನ ಕಳ್ಳಸಾಗಾಣಿಕೆ ಮಾಡುತ್ತಿದ್ದಾನೆ ಎಂದು ತಪ್ಪು ತಿಳಿದು ಸುಮಾರು 25 ಕಿಲೋಮೀಟರ್ ವರೆಗೆ ಹಿಂಬಾಲಿಸಿ ಗುಂಡಿಕ್ಕಿ ಹತ್ಯೆಗೈದ ಘಟನೆ ಹರ್ಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.

ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಯುವಕ ಆರ್ಯನ್ ಮಿಶ್ರಾ(19) ಎಂದು ತಿಳಿದು ಬಂದಿದೆ.

ಪ್ರಕರಣದ ಕುರಿತು; ಆಗಸ್ಟ್ 23 ರಂದು ಮಧ್ಯರಾತ್ರಿ ಆರ್ಯನ್ ಮಿಶ್ರಾ ತನ್ನ ಸ್ನೇಹಿತರಾದ ಹರ್ಷಿತ್ ಮತ್ತು ಶಾಂಕಿ ಅವರೊಂದಿಗೆ ನೂಡಲ್ಸ್ ತಿನ್ನಲು ಡಸ್ಟರ್ ಕಾರಿನಲ್ಲಿ ಹೊರಟಿದ್ದರು. ಗೋಕಳ್ಳರು ಡಸ್ಟರ್ ಮತ್ತು ಫಾರ್ಚುನರ್ ಕಾರುಗಳನ್ನು ಬಳಸಿ ಜಾನುವಾರು ಕಳ್ಳಸಾಗಣಿಕೆ ನಡೆಸುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಲಭಿಸಿದ್ದು, ಇದೆ ವೇಳೆ ನಗರದಲ್ಲಿ ಆರ್ಯನ್ ಮಿಶ್ರಾ ಅವರಿದ್ದ ಡಸ್ಟರ್ ಕಾರು ರಸ್ತೆಯಲ್ಲಿ ಸಾಗಿದೆ ಇದನ್ನು ಕಂಡ ಗೋರಕ್ಷಕರು ಡಸ್ಟರ್ ಕಾರಿನಲ್ಲಿರುವವರು ಗೋಕಳ್ಳರು ಎಂದು ಭಾವಿಸಿದ್ದಾರೆ. ನಂತರದಲ್ಲಿ ಅವರನ್ನು ಹಿಂಬಾಲಿಸಿದ್ದಾರೆ ಜೊತೆಗೆ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹರ್ಷಿತ್ ಡಸ್ಟರ್ ಕಾರನ್ನು ಓಡಿಸುತ್ತಿದ್ದು, ಅದರಲ್ಲಿ ಆರ್ಯನ್ ಕೂಡ ಇದ್ದರು. ಕಾರಿನ ಹಿಂಭಾಗದಲ್ಲಿ ಶಾಂಕಿ ಮತ್ತು ಇಬ್ಬರು ಮಹಿಳೆಯರು ಕುಳಿತಿದ್ದರು ಎನ್ನಲಾಗಿದೆ.

ಶಂಕಿ ಹಾಗೂ ಹರ್ಷಿತ್ ಇತ್ತೀಚೆಗೆ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದ್ದು, ಶಂಕಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇನ್ನು ಇದಕ್ಕೆ ಪೂರಕವೆಂಬಂತೆ ಯುವಕರ ತಂಡ ಹಿಂಬಾಲಿಸಿದ್ದು, ಇದರಿಂದ ಗಾಬರಿಗೊಂಡ ಹರ್ಷಿತ್ ಮತ್ತು ಶಂಕಿ ಹಿಂದೆ ಜಗಳವಾಡಿದ ವ್ಯಕ್ತಿಯೇ ಹೊಡೆಯಲು ಜನ ಕರೆದುಕೊಂಡು ಬಂದಿದ್ದಾನೆ ಎಂದು ತಪ್ಪಾಗಿ ಭಾವಿಸಿದ್ದು, ಮತ್ತೇ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ, ಅತ್ತ ಕಾರು ನಿಲ್ಲಿಸದೆ ವೇಗವಾಗಿ ಸಾಗುತ್ತಿದ್ದ ಡಸ್ಟರ್ ಕಾರಿನಲ್ಲಿರುವವರು ಗೋ ಕಳ್ಳರೇ ಎಂದು ತಪ್ಪಾಗಿ ಭಾವಿಸಿದ ಗೋರಕ್ಷಕರು ಇವರು ಗೋ ಕಳ್ಳರೇ ಎಂದು ಭಾವಿಸಿ ಕಾರನ್ನು ಬೆನ್ನಟ್ಟಿ ಸುಮಾರು ಇಪ್ಪತೈದು ಕಿಲೋಮೀಟರ್ ದೂರ ಹಿಂಬಾಲಿಸಿಕೊಂಡು ಹೋಗಿ ಬಳಿಕ ಟೋಲ್ ಗೇಟ್ ಬಳಿ ಡಸ್ಟರ್ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಈ ವೇಳೆ ಗುಂಡು ಹಿಂಬದಿಯ ಕಿಟಕಿಯಿಂದ ಹಾದು ಶಾಟ್‌ಗನ್‌ನಲ್ಲಿ ಕುಳಿತಿದ್ದ ಆರ್ಯನ್‌ಗೆ ಹೊಡೆದಿದೆ. ಇದನ್ನು ಕಂಡ ಹರ್ಷಿತ್ ಕೂಡಲೇ ಕಾರು ನಿಲ್ಲಿಸಿದ್ದಾನೆ ಈ ವೇಳೆ ಗೋರಕ್ಷಕರೂ ಕಾರಿನ ಬಳಿ ಬಂದಿದ್ದಾರೆ ಆದರೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿದ್ದವರು ಗೋಕಳ್ಳರಲ್ಲ ಬದಲಿಗೆ ಬೇರೆ ವ್ಯಕ್ತಿಗಳೆಂದು ಅರಿವಿಗೆ ಬಂದು ಗೋರಕ್ಷಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಆರ್ಯನ್ ಮಿಶ್ರಾ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ, ಒಂದು ದಿನದ ಬಳಿಕ ಆರ್ಯನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಫರೀದಾಬಾದ್ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು  ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರವ್ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!