- Advertisement -
- Advertisement -
ಬೆಳಗಾವಿ: ನಾನು ಹಾಗೂ ಡಿ.ಕೆ.ಶಿವಕುಮಾರ್ ಉತ್ತಮ ಸ್ನೇಹಿತರಾಗಿದ್ವಿ. ನಾವಿಬ್ರೂ ಅಣ್ಣ ತಮ್ಮಂದಿರಂತೆ ಇದ್ವಿ. ಆದ್ರೆ ನಮ್ಮಿಬ್ಬರ ಸಂಬಂಧ ಹಾಳಾಗಿದ್ದೇ ಬೆಳಗಾವಿ ಗ್ರಾಮಾಂತರ ಶಾಸಕಿಯಿಂದ ಎಂದು ರಮೇಶ್ ಜಾರಕಿಹೊಳಿ ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಹೆಸರೇಳದೇ ಆ ವಿಷಕನ್ಯೆಯಿಂದಲೇ ನನ್ನ ಡಿಕೆಶಿ ಸಂಬಂಧ ಹಾಳಾಯ್ತು. ಆಕೆಯಿಂದಲೇ ಕಾಂಗ್ರೆಸ್ ಪಕ್ಷವೂ ಹಾಳಾಗ್ತಿದೆ ಎಂದರು. ನನ್ನ ವಿರುದ್ಧ ಸಿಡಿ ಷಡ್ಯಂತ್ರ ಮಾಡಿದ್ದೇ ಡಿಕೆಶಿ. ಅವರ ಬಳಿ ಇನ್ನೂ ನೂರಾರು ಸಿಡಿಗಳಿವೆ. ಸಾಕಷ್ಟು ಮಂದಿ ಡಿಕೆಶಿ ಬಲೆಯಲ್ಲಿ ಬಿದ್ದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ರು.
- Advertisement -