- Advertisement -
- Advertisement -
ಶಿಶಿಲ : ಇತ್ತೀಚಿಗೆ ಕೊರೊನ ಸೋಂಕು ದೃಢಗೊಂಡು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ರವರು ಶೀಘ್ರ ಗುಣಮುಖರಗಲಿ ಎಂದು,ಕಾರಣಿಕದ ಕ್ಷೇತ್ರ ಶ್ರೀ ಶಿಶಿಲೇಶ್ವರ ದೇವರ ಸನ್ನಿಧಿಯಲ್ಲಿ ಕಾರ್ಯಕರ್ತರು , ಅಭಿಮಾನಿಗಳು ಮತ್ತು ಊರವರು ಸೇರಿ ಇಂದು ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು .
ಈ ಸಂದರ್ಭದಲ್ಲಿ ಶಿಶಿಲೇಶ್ವರ ದೇವಸ್ಥಾನ ಮಾಜಿ ಅಧ್ಯಕ್ಷ ಶ್ರೀನಿವಾಸ ಮುಡೆತ್ತಾಯ , ಶಿಶಿಲ ಬಿ.ಜೆ.ಪಿ ಶಕ್ತಿ ಕೇಂದ್ರ ಪ್ರಮುಖ್ ಸೂರಜ್ ನೆಲ್ಲಿತ್ತಾಯ , ಧರ್ಮಸ್ಥಳ ಮಹಾ ಶಕ್ತಿ ಕೇಂದ್ರ ಕಾರ್ಯದರ್ಶಿ ಕರುಣಾಕರ ಶಿಶಿಲ , ಬೂತ್ ಸಮಿತಿ ಅಧ್ಯಕ್ಷ ಸಂದೀಪ್ ಅಂಬುಡಂಗೆ , ಹಾಗೂ ಹರೀಶ್ ಪೂಂಜ ಅಭಿಮಾನಿಗಳು ಊರವರು ಭಾ.ಜ.ಪ ಕಾರ್ಯಕರ್ತರು ಉಪಸ್ಥಿತಿಯಲ್ಲಿ ಶಾಸಕರು ಶೀಘ್ರ ಗುಣಮುಖರಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿಲಾಯಿತು.
- Advertisement -