- Advertisement -
- Advertisement -
ಪುತ್ತೂರು; ಪದೇ ಪದೇ ಕೋಮುದಳ್ಳುರಿಯಿಂದಾಗಿ ಸುದ್ದಿಯಾಗುವ ಕರಾವಳಿಯಲ್ಲಿ ಕೋಮು ಸೌಹಾರ್ದತೆ ಸಾರುವ ಘಟನೆಯೊಂದು ನಡೆದಿದೆ.
ಪುತ್ತೂರು ತಾಲೂಕಿನ ಪುಣಚದಲ್ಲಿ ಹಿಂದೂ ಗೆಳೆಯನೊಬ್ಬನ ಬರ್ತಡೇಯನ್ನು ಮುಸ್ಲಿಂ ಗೆಳೆಯರು ಅದ್ಧೂರಿಯಾಗಿ ಆಚರಿಸಿ ಕರಾವಳಿಯಲ್ಲಿ ಶಾಂತಿ ಸೌಹಾರ್ದತೆ ಇನ್ನು ಜೀವಂತವಾಗಿದೆ ಎಂಬ ಸಂದೇಶ ಸಾರಿದ್ದಾರೆ.
‘ಪಿರ್ಸತೆ ಚಂಹಿಮಾರ್’ ಮುಸ್ಲಿಂ ಗ್ರೂಪ್ ನ ಸದಸ್ಯರು ಪುಣಚದ ದಿವಾಕರ ಎಂಬವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೀಗ ಬರ್ತಡೇಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಇವರ ಸ್ನೇಹದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
- Advertisement -