Tuesday, September 26, 2023
Homeಕರಾವಳಿಕುತ್ಲೂರು: ಸಂಘಟನೆಯ ವತಿಯಿಂದ ಬಡವರಿಗೆ ಅಕ್ಕಿ ವಿತರಣೆ

ಕುತ್ಲೂರು: ಸಂಘಟನೆಯ ವತಿಯಿಂದ ಬಡವರಿಗೆ ಅಕ್ಕಿ ವಿತರಣೆ

- Advertisement -
- Advertisement -

ಬೆಳ್ತಂಗಡಿ: ಸಮಾಜ ಸೇವೆಯನ್ನೇ ಜೀವಾಳವಾಗಿರಿಸಿಕೊಂಡಿರುವ ತಾಲೂಕಿನ ಹೆಸರಾಂತ ಸಂಘಟನೆ ರಾಜಕೇಸರಿಯ ಕುತ್ಲೂರು ಘಟಕದ ವತಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸುಶೀಲ ದೇವಾಡಿಗ ಮತ್ತು ಸಿದ್ದಮ್ಮ ದೇವಾಡಿಗ ಇವರಿಗೆ ತಲಾ 10 ಕೆಜಿ ಅಕ್ಕಿ ಮತ್ತು ಮನೆಗೆ ಬೇಕಾಗುವಂತಹ ಸಾಮಗ್ರಿಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜಕೇಸರಿ ಸಂಸ್ಥಾಪಕ ದೀಪಕ್.ಜಿ ಬೆಳ್ತಂಗಡಿ, ವೇಣೂರು ಠಾಣಾ ಉಪನಿರೀಕ್ಷ ಲೋಲಕ್ಷ.ಕೆ ಪೊಲೀಸ್ ಕಾನ್ಸ್ಟೇಬಲ್ ಕೃಷ್ಣ ನಾಯ್ಕ್ , ಪಿ.ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ, ಹನುಮಂತಪ್ಪ, ರಾಜಕೇಸರಿ ಸಂಘಟನೆಯ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ರಾಜಕೇಸರಿ ಕುತ್ಲೂರು ಘಟಕದ ಸಂಚಾಲಕ ಸಂಪತ್ ಜೈನ್, ಶಶಿಧರ್ ಕುಲಾಲ್, ಪ್ರಶಾಂತ್ ಪೂಜಾರಿ ಪಿಲ್ಯ, ಸುಮಂತ್ ಕುತ್ಲೂರು, ಚಂದ್ರಶೇಖರ್ ಕುತ್ಲೂರು, ದೀಪಕ್ ಶೆಟ್ಟಿ, ಸಂಪತ್ ಕುಮಾರ್, ನಿತಿನ್ ಕುಮಾರ್ ಇವರುಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!