- Advertisement -
- Advertisement -
ಬೆಳ್ತಂಗಡಿ: ತಾಲೂಕು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಸಿಬ್ಬಂದಿ ವರ್ಗ ಆತಂಕಕ್ಕೀಡಾದ ಘಟನೆ ಇಂದು ನಡೆದಿದೆ.
ಹೊರ ರೋಗಿ ವಿಭಾಗದ ಒಳಗಿನ ಕಪಾಟಿನೊಳಗೆ ಹೆಬ್ಬಾವು ಅವಿತುಕೊಂಡಿತ್ತು ,ಕಪಾಟು ತೆರೆದಾಗ ಹೆಬ್ಬಾವು ಇರುವುದು ಕಂಡು ಬಂದಿದೆ.
ಸ್ವಲ್ಪ ಸಮಯದಲ್ಲಿ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಬಳಿಕ ಲಾಯಿಲದ ಸ್ನೇಕ್ ಅಶೋಕ್ ಬಂದು ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
- Advertisement -