- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯನಿಗೆ ಮತ್ತು ಪತ್ನಿ ಮಲ್ಲಿಕಾ ಖಾತೆಗೆ ಹಲವಾರು ಮಂದಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.ತಿಮರೋಡಿ ಮಹೇಶ್ ಶೆಟ್ಟಿ ಪತ್ನಿ ಸರೋಜ ಬ್ಯಾಂಕ್ ಖಾತೆಯಿಂದ ಕೂಡ ಹಣ ವಹಿವಾಟು ಮಾಡಿರುವ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಪರಿಶೀಲನೆ ವೇಳೆ ಪತ್ತೆ ಹಚ್ಚಿದ್ದಾರೆ.
ಈ ಪ್ರಕರಣ ಸಂಬಂಧ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಸೆ.24 ರಂದು ಮಧ್ಯಾಹ್ನ ಎಸ್.ಐ.ಟಿ ಅಧಿಕಾರಿಗಳು ತೆರಳಿ ಪತ್ನಿ ಸರೋಜ ಬಳಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
- Advertisement -


