- Advertisement -
- Advertisement -
ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾಗಿರುವ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಭೂ ಕಂಪನದ ಹಿನ್ನೆಲೆಯಲ್ಲಿ ಚೆಂಬು ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಡಾ. ಜಗದೀಶ್ ನೇತೃತ್ವದ ರಾಜ್ಯ ನೈಸರ್ಗಿಕ ವಿಕೋಪ ಅಧ್ಯಯನ ತಂಡ ಭೇಟಿ ನೀಡಿದೆ.
ಎರಡು ದಿನಗಳ ಹಿಂದೆ ಸಂಭವಿಸಿದ್ದ ಭೂ ಕಂಪನದ ಕೇಂದ್ರ ಬಿಂದು ಚೆಂಬು ಗ್ರಾಮದಲ್ಲಿದ್ದ ಕಾರಣ ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ ಭೂ ಕಂಪನ ಮಾಪನ ಯಂತ್ರ ಅಳವಡಿಕೆ ಮಾಡಲಾಗಿದೆ. ಭೂಮಿಯೊಳಗಿನ ಕಂಪನಗಳನ್ನು ದಾಖಲಿಸುವ ಬ್ರಾಡ್ ಬ್ಯಾಂಡ್ ಸಿಸ್ಮೋ ಮೀಟರ್ ಅಳವಡಿಸಲಾಗಿದೆ.ಚೆಂಬು ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ ಮೂರು ಬಾರಿ ಕಂಪನ ಸಂಭವಿಸಿತ್ತು.
- Advertisement -