- Advertisement -
- Advertisement -
ಮಂಗಳೂರು: ಸಿದ್ದರಾಮಯ್ಯ ಅವ್ರು ವೀರ ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಅದನ್ನ ಮರೆಮಾಚಲು ಈಗ ಮಾಂಸ ಸೇವಿಸಿ ದೇವಸ್ಥಾನದ ಭೇಟಿ ಬಗ್ಗೆ ಮಾತನಾಡ್ತಿದ್ದಾರೆ ಅಂತ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ದೇವರನ್ನೂ ನಂಬಲ್ಲ, ರಾಷ್ಟ್ರವನ್ನೂ ನಂಬಲ್ಲ. ಅಂತಹ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದ್ರು. ಸಾವರ್ಕರ್ ಬಗೆಗಿನ ಹೇಳಿಕೆ ವಿವಾದಕ್ಕೆ ತಿರುಗಿದ್ದನ್ನು ಮರೆಮಾಚಲು ಮಾಂಸ ಸೇವಿಸಿ ದೇವಸ್ಥಾನದ ಭೇಟಿ ವಿಚಾರವನ್ನು ಮಾತನಾಡುತ್ತಿದ್ದಾರೆ ಎಂದು ನಳಿನ್ ಆರೋಪಿಸಿದರು.
- Advertisement -