- Advertisement -
- Advertisement -
ಬೆಳ್ತಂಗಡಿ: ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಶಿರ್ಲಾಲಿನ ಮಹಿಳೆಗೆ ಕೊರೊನಾ ಸೊಂಕು ದೃಢ ಪಟ್ಡು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ.
ಈ ಸಂತಸದ ಸಮಯದಲ್ಲಿ ಇವರ ಕುಟುಂಬದ ವತಿಯಿಂದ ಇದೀಗ ಶಿರ್ಲಾಲು ಕಂಟೈನ್ಮೆಂಟ್ ಪ್ರದೇಶದ ಸುಮಾರು 12 ಮನೆಗಳಿಗೆ ಹೆಲ್ಪ್ ಡೆಸ್ಕ್ ಮುಖೇನಾ ಆಹಾರ ಕಿಟ್ಟನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ಶಿಷ್ಟಾಚಾರ ಪಾಲಿಸಿ ವೇಣೂರು ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲೋಲಾಕ್ಷ ವಿತರಿಸಿದರು.
ಈ ಸಂದರ್ಭದಲ್ಲಿ ಶಿರ್ಲಾಲು ಪಿಡಿಓ ರಾಜು, ಬೀಟ್ ಪೋಲಿಸ್ ಅಭಿಜಿತ್,ಹನುಮಂತ್ ,ಶಿರ್ಲಾಲು ಗ್ರಾ.ಪಂ ನ ಸಿಬ್ಬಂದಿ ಸುಪ್ರಿತಾ ಶೆಟ್ಟಿ,ಉದ್ಯಮಿ ಶ್ರೀಧರ ಪೂಜಾರಿ ಉಪಸ್ಥಿತರಿದ್ದರು.
- Advertisement -