Thursday, April 25, 2024
Homeಇತರಸೆಲ್ಫಿ ಕ್ರೇಜ್ - ಕಾಡಾನೆ ದಾಳಿಗೆ ಯುವಕ ಬಲಿ

ಸೆಲ್ಫಿ ಕ್ರೇಜ್ – ಕಾಡಾನೆ ದಾಳಿಗೆ ಯುವಕ ಬಲಿ

spot_img
- Advertisement -
- Advertisement -

ಛತ್ತೀಸ್‍ಗಢ್‍ : ಕಾಡಾನೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ಆನೆ ಕಾಲಿನಡಿ ಸಿಲುಕಿ ಅಪ್ಪಚ್ಚಿಯಾಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢ್‍ನ ರಾಯಗಢದಲ್ಲಿ ನಡೆದಿದೆ.
ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ 21 ವರ್ಷದ ಯುವಕನನ್ನ ಕಾಡಾನೆ ಕೊಂದು ಹಾಕಿದ ಘಟನೆ ಚತ್ತೀಸಗಢದ ರಾಯಗಢ ಜಿಲ್ಲೆಯ ಗುಧಯ್ರಿ ಗ್ರಾಮದ ಸಾರಂಗಗಢ ಅರಣ್ಯ ಪ್ರದೇಶದಲ್ಲಿ ನಡೆದಿದೆ .
ಮೃತ ಯುವಕನನ್ನ ಮನೋಹರ್​ ಪಟೇಲ್​ ಎಂದು ಗುರುತಿಸಲಾಗಿದೆ. ನಾಲ್ವರು ಗೆಳೆಯರು ಒಂದಾಗಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಾಹಸಕ್ಕೆ ಇಳಿದಿದ್ದರು ಎಂದು ರಾಯ್​ಗಢ ಅರಣ್ಯ ಇಲಾಖೆ ವಿಭಾಗದ ಡಿಎಫ್​ಓ ಪ್ರಣಯ್​ ಮಿಶ್ರಾ ಹೇಳಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನ ಬೆನ್ನಟ್ಟಿದ ವೇಳೆಯಲ್ಲಿ ಸಾಕಷ್ಟು ಮಂದಿ ಸ್ಥಳೀಯರು ಸ್ಥಳದಲ್ಲಿ ನೆರೆದಿದ್ದರು ಅಂತಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಟೇಲ್​ ಹಾಗೂ ಆತನ ಮೂವರು ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಆನೆಯ ತುಂಬಾ ಸಮೀಪಕ್ಕೆ ಹೋಗಿದ್ದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಆನೆ ಕೂಡಲೇ ಈ ನಾಲ್ವರ ಮೇಲೆ ಆಕ್ರಮಣಕ್ಕೆ ಮುಂದಾಗಿದೆ. ಮೂವರು ಹೇಗೋ ಆನೆ ಕೈಯಿಂದ ಬಚಾವಾಗಿದ್ದಾರೆ. ಆದರೆ ಪಟೇಲ್​ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ಯುವಕನ ಕುಟುಂಬಕ್ಕೆ 25 ಸಾವಿರ ರೂಪಾಯಿ ಶೀಘ್ರ ಪರಿಹಾರ ನೀಡಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈ ಹೆಣ್ಣು ಆನೆ ಪಟೇಲ್​ಗೂ ಮೊದಲು ಮಲ್ದಾ ಗ್ರಾಮದಲ್ಲಿ ಹಿರಿಯ ವಯಸ್ಸಿನ ಮಹಿಳೆಯನ್ನ ಶುಕ್ರವಾರ ಕೊಲೆ ಮಾಡಿತ್ತು. ಕೆಲ ದಿನಗಳ ಹಿಂದಷ್ಟೇ ಈ ಆನೆ ಸಾರಂಗಗಢ ಪ್ರದೇಶಕ್ಕೆ ಎಂಟ್ರಿ ನೀಡಿತ್ತು .

- Advertisement -
spot_img

Latest News

error: Content is protected !!