Saturday, May 4, 2024
Homeಕರಾವಳಿಮಂಗಳೂರು: ಸ್ಕೂಟರ್‌ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಫುಟ್‌ಪಾತ್‌ ಅಂಚಿಗೆ ಢಿಕ್ಕಿ-ಸವಾರನಿಗೆ ಗಂಭೀರ ಗಾಯ...!!

ಮಂಗಳೂರು: ಸ್ಕೂಟರ್‌ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಫುಟ್‌ಪಾತ್‌ ಅಂಚಿಗೆ ಢಿಕ್ಕಿ-ಸವಾರನಿಗೆ ಗಂಭೀರ ಗಾಯ…!!

spot_img
- Advertisement -
- Advertisement -

ಮಂಗಳೂರು: ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಫುಟ್‌ಪಾತ್‌ ಅಂಚಿಗೆ ಢಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಬೆಂದೂರ್‌ವೆಲ್‌ನಲ್ಲಿ ನಡೆದಿದೆ. ಗಾಯಾಳುವನ್ನು ಗೌಶಿಕ್‌ ಎಂದು ಗುರುತಿಸಲಾಗಿದೆ.

ಅತೀ ವೇಗವಾಗಿ ಬಲ್ಮಠ ಕಡೆಯಿಂದ ಬೆಂದೂರ್‌ವೆಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್‌ ರಸ್ತೆಯಲ್ಲಿ ನ್ಯೂ ಸ್ವಾಗತ್‌‌ ಹೋಟೆಲ್‌ನ ಮುಂಭಾಗ ತಿರುವು ಪ್ರದೇಶದತ್ತ ಸಾಗುತ್ತಿತ್ತು. ಈ ಸಂದರ್ಭ ಸವಾರನಿಗೆ ಸ್ಕೂಟರ್‌ ಅನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ ಕಾಂಕ್ರೀಟ್‌ ರಸ್ತೆಗೆ ಬಿದ್ದಿದ್ಧಾನೆ.

ಬಿದ್ದ ರಭಸಕ್ಕೆ ಸ್ಕೂಟರ್‌ ಸಮೇತ ಸುಮಾರು 20 ಅಡಿ ದೂರದವರೆಗೆ ಎಳೆದುಕೊಂಡು ಹೋಗಿ ಲಕ್ಷ್ಮೀ ಮೆಮೊರಿಯಲ್‌‌ ಕಾಲೇಜ್‌ ಆಫ್‌‌ ಫಿಜಿಯೋಥೆರಪಿ ಮುಂಭಾಗದ ಫುಟ್‌ ಪಾತ್ ಅಂಚಿಗೆ ಢಿಕ್ಕಿ ಹೊಡೆದು ಫುಟ್‌ಪಾತ್‌ನ ಮೇಲೆ ಬಿದ್ದ ಪರಿಣಾಮ ಸ್ಕೂಟರ್‌ ಸವಾರನ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!