- Advertisement -
- Advertisement -
ಸವಣೂರು: ಪುತ್ತುರು ತಾಲೂಕಿನ ಸವಣೂರು ವಲಯ ಕರ್ನಾಟಕ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಬಾಲಚಂದ್ರ ಗೌಡರು ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಶೈಲಿ ಚಂದ್ರಣ್ಣ ಎಂದೇ ಗುರುತಿಸಿಕೊಂಡಿದ್ದ ಇವರು ನರಿಮೊಗರು ಬಜಪ್ಪಳ ನಿವಾಸಿಯಾಗಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿತ್ವದ ಇವರು ಕಳೆದ 30 ವರ್ಷಗಳಿಂದ ಸವಣೂರಿನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದರು.
ಮೃತರು ಪತ್ನಿ,ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಬಾಲಚಂದ್ರ ಗೌಡ ಇವರ ನಿಧನದ ಸುದ್ದಿ ತಿಳಿಯುತ್ತಲೇ ಸವಣೂರಿನ ವರ್ತಕರು ತಮ್ಮ ಅಂಗಡಿ ಮುಂಗಡ್ಡುಗಳನ್ನು ಮುಚ್ಚಿ ಸಂತಾಪ ಸೂಚಿಸಿದರು.
- Advertisement -