ಸುಳ್ಯ: ವಿಖಾಯ ಸಮಿತಿಯ ವತಿಯಿಂದ ಮಡಿಕೇರಿ ತಾಲೂಕು ಸಂಪಾಜೆ ಪದವಿಪೂರ್ವ ಕಾಲೇಜಿನ SSLC ಪರೀಕ್ಷಾ ಕೇಂದ್ರದ ಪರಿಸರದಲ್ಲಿ ಶುಚಿತ್ವ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ,ಔಷದೀಯ ಗಿಡ ನೆಡುವ ಕಾರ್ಯಕ್ರಮ ಇಂದು ನಡೆಯಿತು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಐತಪ್ಪ, ದೈಹಿಕ ಶಿಕ್ಷಕರಾದ ಕುಶಾಲಪ್ಪ, ರಮಾನಂದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸುಬ್ರಮಣ್ಯ ಉಪಾಧ್ಯಾಯ ಎಸ್.ಕೆ. ಮಹಮ್ಮದ್ ಹನೀಫ್,ಸಿಬ್ಬಂದಿಗಳಾದ ಕೆ, ಜಿ, ಭಟ್, ದಾಮೋದರ ಹಾಗೂ ಸುಳ್ಯ SKSSF ಅಧ್ಯಕ್ಷರಾದ ಜಮಾಲ್ ಬೆಳ್ಳಾರೆ, ಸುಳ್ಯ ವಿಖಾಯ ತಂಡದ ಚೆರ್ಮೆನ್ ಷರೀಫ್ ಅಜ್ಜಾವರ, ಕನ್ವೀನರ್ ಖಲಂದರ್ ಎಲಿಮಲೆ,ಕಾರ್ಯದರ್ಶಿ ತಾಜುದ್ದೀನ್ ಟರ್ಲಿ,ವಿಖಾಯ ಎಕ್ಟೀವ್ ವಿಂಗ್ ಸದಸ್ಯರಾದ ಆಶಿಕ್ ಸುಳ್ಯ, ತಾಜುದ್ದೀನ್ ಆರಂತೋಡು,ಇಲ್ಯಾಸ್ ತೋಟಮ್, ಸಿದ್ದೀಕ್ ಜೀರ್ಮುಖಿ, ಮುನೀರ್ ದಾರಿಮಿ ಸೇರಿದಂತೆ ಸುಮಾರು ಮೂವತ್ತು ಜನ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು,
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎಂ,ಎಸ್,ಭಟ್ ಸೇರಿದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.