- Advertisement -
- Advertisement -
ಬೆಳ್ತಂಗಡಿ : ಬೆಳಾಲು ಗ್ರಾಮದ ಹಳೆಮಾಯ ಸೋಮು ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಕಡವೆಯನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಡಿ.25ರ ಬೆಳಿಗ್ಗೆ ಮನೆಯವರಿಗೆ ವಿಚಾರ ತಿಳಿದು ಬಂದಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಉಪ್ಪಿನಂಗಡಿ ಆರ್ ಎಫ್ ಓ ಜಯ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ದಡಂತಮಲೆ ಶಾಖೆಯ ಡಿ ಆರ್ ಎಫ್ ಓ ಲೋಕೇಶ್,ಗಸ್ತು ಅರಣ್ಯ ರಕ್ಷಕ ವಿನಯ ಚಂದ್ರ ಹಾಗೂ ಬೆಳಾಲು ಶೌರ್ಯ ವಿಪತ್ತು ತಂಡದವರು ಸೇರಿ ಸುಮಾರು ಮೂರು ವರ್ಷ ಪ್ರಾಯದ ಕಡವೆಯನ್ನು ಜೆಸಿಬಿ ಮೂಲಕ ಮೇಲೆ ಎತ್ತಿ ಪ್ರಥಮ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
- Advertisement -