ಬೆಳ್ತಂಗಡಿ: ಗುರುಪೂರ್ಣಿಮೆಯ ದಿನವಾದ ಇಂದು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ್ಯ ವೃತಾರಂಭಕ್ಕೆ ಚಾಲನೆ ನೀಡಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಸ್ವಾಗತಿಸಿದರು. ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಭಟ್ಕಳ ಮಾಜಿ ಶಾಸಕ ಮಾಂಕಲ್ ವೈದ್ಯ, ಕರ್ನಾಟಕ ಸರಕಾರದ ಕ್ಯೂನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ, ಕಂಕನಾಡಿ ಗರೋಡಿಯ ಮುಖ್ಯಸ್ಥರಾದ ಚಿತ್ತರಂಜನ್, ಶ್ರೀ ರಾಮ ಕ್ಷೇತ್ರ ಚಾತುರ್ಮಾಸ್ಯ ಸಮಿತಿಯ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ ಶ್ರೀಧರ ಬಿ ನಾಯ್ಕ್, ಕೃಷ್ಣ ನಾಯ್ಕ್, ಶ್ರೀಧರ ನಾಯ್ಕ್, ವಾಮನ ನಾಯ್ಕ್, ಆರ್.ಜೆ ನಾಯ್ಕ್, ಗೋವಿಂದ ನಾಯ್ಕ್, ಪಿ.ಕೆ ರಾಜು ಪೂಜಾರಿ, ಸುಬ್ರಾಯ ನಾಯ್ಕ್, ಸಂಜೀವ ಪೂಜಾರಿ, ದೇಜಪ್ಪ ಬಾಚಕೆರೆ, ಶಿವರಾಮ, ಭಗೀರಥ ಜಿ, ಶೈಲೇಶ್ ಕುಮಾರ್ ಕುರ್ತೋಡಿ, ಸುಂದರ ಹೆಗ್ಡೆ ವೇಣೂರು, ಎಂ. ತುಂಗಪ್ಪ ಬಂಗೇರ, ಹರೀಶ್ ಮೋರ್ತಾಜೆ, ದಯಾನಂದ ಬೆಳಾಲು, ರಾಜು ನಾಯ್ಕ್, ಎಂ ಶಶಿಧರ ಕಲ್ಮಂಜ, ಸುಧೀರ್ ಆರ್ ಸುವರ್ಣ, ರವೀಂದ್ರ ಆರ್ಲ, ತುಕಾರಾಮ್ ಸಾಲಿಯಾನ್, ರಾಜು ಪೂಜಾರಿ ಕಾಶಿಪಟ್ಣ, ಸುಜಾತಾ ಅಣ್ಣಿ ಪೂಜಾರಿ, ಧರ್ಮಣ ಗೌಡ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪ್ರಶಾಂತ್ ಪ್ರತಿಮನಿಲಯ,ಕೃಷ್ಣಪ್ಪ ಗುಡಿಗಾರ, ಜಯಶಂಕರ್ ಎಂ.ಬಿ, ಮೊದಲಾದ ಪ್ರಮುಖರು, ಭಕ್ತಾಧಿಗಳು. ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೇಶವ ಬಂಗೇರ ಕಳಿಯ ಕಾರ್ಯಕ್ರಮವನ್ನು ನಿರೂಪಿಸಿದರು.