- Advertisement -
![]()
- Advertisement -
ಮಂಗಳೂರು: ಅಂಗಡಿ ಮಾಲೀಕರಿಂದ ರೌಡಿ ಶೀಟರ್ ಒಬ್ಬ ಸುಲಿಗೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿರುವ ಘಟನೆ ಬಜ್ಪೆಯಲ್ಲಿ ನಡೆದಿದೆ.
ದಿನಾಂಕ 22-10-2025 ರಂದು ಬಜ್ಪೆಯ ಪಟಾಕಿ ಅಂಗಡಿಯ ಮಾಲೀಕ ದಾಮೋದರ್ ಅವರನ್ನು ಫಾಝಿಲ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಹಾಗೂ ಅಶ್ವಿತ್ ಬೆದರಿಸಿ ಸುಲಿಗೆ ಮಾಡಿದ್ದಾರೆ. ಆರಂಭದಲ್ಲಿ ದಾಮೋದರ್ ಅವರು ಆರೋಪಿಗಳ ಭಯದಿಂದ ದೂರು ನೀಡೋದಕ್ಕೆ ಮುಂದೆ ಬಂದಿರಲಿಲ್ಲ. ಆದರೆ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾರೆ.
- Advertisement -


