- Advertisement -
- Advertisement -
ಕುಂದಾಪುರ ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೋಜ್ಗಾರ್ ದಿನ ಆಚರಿಸಲಾಯಿತು . ಕೆರೆ ರಚನೆ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ 15 ಮಹಿಳೆಯರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಿಗುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇನ್ನು ಇದೇ ಸಂದರ್ಭ ದೌರ್ಜನ್ಯ ಮುಕ್ತಿ ಅಭಿಯಾನದ ಅಂಗವಾಗಿ ಕಾರ್ಮಿಕರಿಗಿರುವ ಕಾನೂನು ಸುವ್ಯವಸ್ಥೆಗಳ ಕುರಿತು ತಿಳಿಸಲಾಯಿತು.
ಈ ಸಂದರ್ಭ ಆಲೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ, ಬಿ.ಎಫ್.ಟಿ ಶ್ರೀಪತಿ, ಪಂಚಾಯತ್ ಸಿಬ್ಬಂದಿ ಪ್ರೀತಿ ಉಪಸ್ಥಿತರಿದ್ದರು.
- Advertisement -