- Advertisement -
- Advertisement -
ಮಂಗಳೂರು: ಚಲನಚಿತ್ರ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಮಂಗಳೂರಿನಲ್ಲಿ ದೈವಕೋಲದಲ್ಲಿ ಭಾಗಿಯಾಗಿ ಮಹಿಸಂದಾಯ ದೈವದ ಆಶೀರ್ವಾದ ಪಡೆದಿದ್ದಾರೆ.
ಗುರುಪುರದಲ್ಲಿರುವ ವಜ್ರದೇಹಿ ಮಠದ ದೈವ ಕೋಲಕ್ಕೆ ಭೇಟಿ ನೀಡಿದ್ದ ರಿಷಭ್ ಶೆಟ್ಟಿ, ಮಹಿಸಂದಾಯ ಕೋಲದಲ್ಲಿ ಭಾಗಿಯಾಗಿದ್ದರು.
ಈ ಹಿಂದೆ ವಜ್ರದೇಹಿ ಮಠದ ಸ್ವಾಮೀಜಿ ಭೇಟಿಯಾದ ಸಂದರ್ಭ ದೈವಕೋಲ ವೀಕ್ಷಿಸುವ ಬಗ್ಗೆ ರಿಷಭ್ ಶೆಟ್ಟಿ ಇಚ್ಛೆ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ಅವರನ್ನು ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಹ್ವಾನಿಸಿದ್ದರು.
ಕೋಲ ವೀಕ್ಷಣೆ ಮಾಡಿದ ಬಳಿಕ ರಿಷಭ್ ಶೆಟ್ಟಿ, ನಾನಿದ್ದೇನೆ ಹೆದರಬೇಡ ಎಂದು ಮಹಿಸಂದಾಯ ದೈವದ ಆಶೀರ್ವಾದ ಪಡೆದಿದ್ದಾರೆ.
- Advertisement -