Wednesday, May 8, 2024
Homeಕರಾವಳಿಉಡುಪಿಕಾಪು: ಬಂಡೆಗೆ ಬಡಿದ ಬೋಟ್‌ನಲ್ಲಿದ್ದ ಐವರು ಮೀನುಗಾರರ ರಕ್ಷಣೆ

ಕಾಪು: ಬಂಡೆಗೆ ಬಡಿದ ಬೋಟ್‌ನಲ್ಲಿದ್ದ ಐವರು ಮೀನುಗಾರರ ರಕ್ಷಣೆ

spot_img
- Advertisement -
- Advertisement -

ಕಾಪು: ಕಾಪುವಿನಿಂದ ಎಂಟು ನಾಟಕಲ್ ಮೈಲಿ ದೂರದಲ್ಲಿ ಸಮುದ್ರದ ಮಧ್ಯದಲ್ಲಿ ಬಂಡೆಗೆ ಬಡಿದ ಬೋಟ್‌ನಲ್ಲಿದ್ದ ಐವರು ಮೀನಿಗಾರರನ್ನು ರಕ್ಷಿಸಲಾಗಿದೆ.

ಮೀನುಗಾರಿಕೆಗೆ ತೆರಳಿದ್ದ ಬಡನಿಡಿಯೂರಿನ ಭಾಸ್ಕರ್ ಎಂ ಪುತ್ರನ್ ಎಂಬುವವರ ಒಡೆತನದ ಸ್ವರ್ಣಗೌರಿ ದೋಣಿ ಬಂಡೆಗೆ ತಾಗಿ ಹಾನಿಗೊಳಗಾಗಿತ್ತು. ತಕ್ಷಣ ವರುಣ ದೋಣಿಯಲ್ಲಿದ್ದ ಮೀನುಗಾರರು ಸ್ವರ್ಣಗೌರಿ ದೋಣಿಯಲ್ಲಿದ್ದ ಸಿಬ್ಬಂದಿಯ ರಕ್ಷಣೆಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದರು.

ಘಟನೆಯಿಂದ ಸುಮಾರು 30 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!