ಉಡುಪಿ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಣೆ ಮಾಡಿದ ಘಟನೆ ಕುತ್ಪಾಡಿ ಬಳಿ ನಡೆದಿದೆ. ಹುಬ್ಬಳ್ಳಿ ಮೂಲದ ಹನುಮಂತ(30) ರಕ್ಷಣೆಗೊಳಾಗದ ಯುವಕ. ಯುವಕನನ್ನು ರಕ್ಷಿಸಿ ವಿಶು ಶೆಟ್ಟಿ ಅಂಬಲಪಾಡಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಕುತ್ಪಾಡಿ ಬಳಿ ರಾತ್ರಿ ಸರಿ ಸುಮಾರು 11ರ ವೇಳೆಗೆ ಸಾರ್ವಜನಿಕರ ತೋಟ, ಮನೆ ಬಳಿ ಭಯದ ವಾತಾವರಣ ಸೃಷ್ಟಿಸಿದ್ದ. ಸ್ಥಳೀಯರು ಒಟ್ಟಾಗಿ ಯುವಕನನ್ನು ಹಿಡಿದು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇನೆ ಎಂಬುದಾಗಿ ಹೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ. ವಿಷಯ ತಿಳಿದ ವಿಶು ಶೆಟ್ಟಿ ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲಿಸಿದರು. ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಯುವಕನು ತೀವ್ರ ಮನೋರೋಗಿಯಾಗಿದ್ದು ತುಂಬಾ ಉಪಟಳ ನೀಡುತ್ತಿದ್ದಾನೆ.ಸಂಬಂಧಿಕರು ಅಥವಾ ಮಾಹಿತಿ ಇರುವವರು ಬಾಳಿಗಾ ಆಸ್ಪತ್ರೆ ಅಥವಾ ನಗರ ಠಾಣೆ ಸಂಪರ್ಕಿಸಿ ಸಹಕರಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.