- Advertisement -
- Advertisement -
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ್ ಪೂಜಾರಿಗೆ ಇಂದು ಕೊಟ್ಟ ಮಾತಿನಂತೆ ಗುರು ಬೆಳದಿಂಗಳು ಫೌಂಡೇಶನ್ ನವೀಕರಿಸಿದ ಮನೆ ಹಸ್ತಾಂತರಿಸಿದೆ.
ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಮನೆಯನ್ನು ಯುಗಾದಿ ಹಬ್ಬದ ದಿನದಂದು ಹಸ್ತಾಂತರಿಸುವ ಮೂಲಕ ಸಂತ್ರಸ್ತನ ಬಾಳಲ್ಲಿ ಸಂತಸ ಮೂಡುವಂತೆ ಮಾಡಿದೆ. ಮಗಳ ಮದುವೆ ನಿಶ್ಚಯವಾಗಿದ್ರಿಂದ ಮನೆ ದುರಸ್ತಿಗೆ ಪುರುಷೋತ್ತಮ್ ಮುಂದಾದಾಗ ಕುಕ್ಕರ್ ಬಾಂಬ್ ಸ್ಫೋಟದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ರು. ಆಗ ಗುರು ಬೆಳದಿಂಗಳು ಫೌಂಡೇಶನ್ ಮನೆ ನವೀಕರಿಸುವುದಾಗಿ ಭರವಸೆ ನೀಡಿದ್ರು. ಅಂತೆಯೇ ಇಂದು ನವೀಕರಿಸಿದ ಮನೆಯನ್ನು ಹಸ್ತಾಂತರಗೊಳಿಸಿದೆ.
- Advertisement -