Monday, April 29, 2024
Homeಅಪರಾಧಬೆಳ್ತಂಗಡಿಯಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ : ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿಯಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ : ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ಬೆಳ್ತಂಗಡಿ: ಮಹಿಳೆಯೊಬ್ಬರ ಮಾನಭಂಗಕ್ಕ ಯತ್ನಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

45 ವರ್ಷದ ವಿವಾಹಿತ ಮಹಿಳೆ ತನ್ನ ಮನೆಯ ಸಮೀಪದ ಗುಡ್ಡಕ್ಕೆ ಕಟ್ಟಿಗೆ ತರಲು ಹೋದಾಗ ಯುವಕನೊಬ್ಬ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನಿಸಿ ನಂತರ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ದೇಸೊಟ್ಟು ಎಂಬಲ್ಲಿ ನಡೆದಿದೆ.

ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಮನೆಯ ಸಮೀಪದ ಗುಡ್ಡೆಗೆ ಕಟ್ಟಿಗೆ ತರಲು ಹೋಗಿದ್ದು, ಕಟ್ಟಿಗೆಯನ್ನು ಕತ್ತಿಯಿಂದ ಕಡಿಯುತ್ತಿರುವ ಸಂದರ್ಭದಲ್ಲಿ ಇಂದಬೆಟ್ಟು ಗ್ರಾಮದ ಲಿಂಗತ್ಯಾರ್ ನಿವಾಸಿ ಸಂತೋಷ್@ಸಂತು (25) ಎಂಬಾತನು ಮಹಿಳೆ ಬಳಿಗೆ ಬಂದು ಕೋಲು ತುಂಡು ಮಾಡುಲು ಕತ್ತಿ ಬೇಕಾಗಿದ್ದು ಸ್ವಲ್ಪ ಕತ್ತಿಯನ್ನು ಕೊಡಿ ಎಂಬುದಾಗಿ ಮಹಿಳೆಯ ಬಳಿ ಕೇಳಿದ್ದು ಮಹಿಳೆ ಕತ್ತಿ ನೀಡಲು ನಿರಾಕರಿಸಿದಾಗ ಪರಿ ಪರಿಯಾಗಿ ಕೇಳಿಕೊಂಡಿದ್ದಕ್ಕೆ ನಂತರ ಕತ್ತಿಯನ್ನು ಪಡೆದುಕೊಂಡ ಸಂತೋಷನು ಕೋಲನ್ನು ತುಂಡು ಮಾಡಿದಂತೆ ಮಾಡಿ ಸುತ್ತಮುತ್ತ ನೋಡುತ್ತಾ ಕತ್ತಿಯನ್ನು ಅಲ್ಲೇ ಬಿಸಾಕಿ ಮಹಿಳೆಯ ಹತ್ತಿರ ಬಂದವನು ಬಲವಂತವಾಗಿ ಹಿಡಿದುಕೊಂಡಿದ್ದು ಮಹಿಳೆ ಬೊಬ್ಬೆ ಹಾಕಿ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಸಂತೋಷ್ ನೆಲಕ್ಕೆ ಮಹಿಳೆಯನ್ನು ದೂಡಿ ಹಾಕಿ ಮೇಲೆ ಬೀಳಲು ಯತ್ನಿಸಿದಾಗ ಕೋಪದಿಂದ‌ ಆತ್ಮ ರಕ್ಷಣೆಗೆ ಕೈಗೆ ಕಚ್ಚಿ ಕಾಲಿನಿಂದ ತುಳಿದಾಗ ಸಂತೋಷ್ ದೂರ ಬಿದ್ದು ಬಿಟ್ಟನು.

ಈ ಘಟನೆಯನ್ನು ದೂರದಿಂದ ನೋಡಿದ ಮಹಿಳೆಯ ಗಂಡ ಹತ್ತಿರ ಬರುತ್ತಿರುವುದನ್ನು ನೋಡಿ ಆರೋಪಿ ಸಂತೋಷನು ಮಹಿಳೆಯನ್ನು ಉದ್ದೇಶಿಸಿ “ಈ ವಿಷಯವನ್ನು ಬೇರೆ ಯಾರಲ್ಲಿಯಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೇದರಿಕೆ ಓಡ್ಡಿ ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು 354(A),506 ಪ್ರಕರಣ ದಾಖಲಿಸಲಾಗಿದ್ದು ಆರೋಪಿ ಸಂತೋಷ್ ನನ್ನು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -
spot_img

Latest News

error: Content is protected !!