Friday, May 3, 2024
Homeಮನರಂಜನೆಹಣ ವಂಚನೆ ಆರೋಪ:ರಜನಿಕಾಂತ್ ಪತ್ನಿ ವಿರುದ್ಧ ಸಮನ್ಸ್ ಜಾರಿ ಮಾಡುವಂತೆ ಕೋರ್ಟ್ಗೆ ಅರ್ಜಿ

ಹಣ ವಂಚನೆ ಆರೋಪ:ರಜನಿಕಾಂತ್ ಪತ್ನಿ ವಿರುದ್ಧ ಸಮನ್ಸ್ ಜಾರಿ ಮಾಡುವಂತೆ ಕೋರ್ಟ್ಗೆ ಅರ್ಜಿ

spot_img
- Advertisement -
- Advertisement -

ಬೆಂಗಳೂರು: ಹಣ ವಂಚನೆ ಆರೋಪ ಪ್ರಕರಣ ಸಂಬಂಧ ಸೂಪರ್ ಸ್ಟಾರ್ ರಜಿನಿಕಾಂತ್ ಪತ್ನಿ ಲತಾ ವಿರುದ್ಧ ಸಮನ್ಸ್​ ಜಾರಿ ಮಾಡುವಂತೆ ಒಂದನೇ ಎಸಿಎಂಎಂ ಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ.

ಲತಾ ಅವರು, ಸಿನಿಮಾ‌ ಬಿಡುಗಡೆಯಾದ ಬಳಿಕ 6.25 ಕೋಟಿ ರೂಪಾಯಿ ಹಣ ಬಾಕಿ ನೀಡದೆ ವಂಚನೆ ಎಸಗಿದ್ದಾರೆಂದು ಕೊಚ್ಚಾಡಿಯನ್ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್​​​​​ಗೆ ಹಣ ಹಾಕಿದ್ದ ಆಯಡ್ ಬ್ಯೂರೊ ಜಾಹಿರಾತು ಕಂಪನಿ ಲಿಮೆಟೆಡ್ ಆರೋಪ ಮಾಡಿತ್ತು. ಈ ಸಂಬಂಧ 2014ರಲ್ಲಿ ಲತಾ ರಜಿನಿಕಾಂತ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಎಫ್‌ಐಆರ್ ರದ್ದು ಮಾಡುವಂತೆ ಲತಾ ರಜಿನಿಕಾಂತ್ ಹೈಕೋರ್ಟ್​ಗೆ ಅರ್ಜಿ ಹಾಕಿದ್ದರು.

ಲತಾ ಅವರು ನಕಲಿ ದಾಖಲೆ ಸೃಷ್ಟಿಸಿ ಹೈಕೋರ್ಟ್​​ನಲ್ಲಿ ಎಫ್​ಐಆರ್​ ರದ್ದು ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಎಫ್​​ಐಆರ್​ ರದ್ದು ಆದೇಶ ಪ್ರಶ್ನಿಸಿ ಆಯಡ್ ಬ್ಯೂರೊ ಜಾಹಿರಾತು ಸಂಸ್ಥೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೋರ್ಟ್​​ ವಿಚಾರಣೆ ಎದುರಿಸುವಂತೆ ಲತಾ ಅವರಿಗೆ ಆದೇಶ ನೀಡಿತ್ತು.

ಈ ಹಿನ್ನೆಲೆ ಲತಾ ವಿರುದ್ಧ ಸಮನ್ಸ್​ ಜಾರಿ ಮಾಡುವಂತೆ ಇಂದು ಆಯಡ್ ಬ್ಯೂರೊ ಕಂಪನಿಯ ಪರವಾಗಿ ವಕೀಲ ಬಾಲನ್ ಹಾಗೂ ಕುಮಾರ್ ಗೌಡ ಒಂದನೇ ಎಸಿಎಂಎಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!