Sunday, June 29, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಮಾದಕ ವ್ಯವಸನ ಜನಜಾಗೃತಿಗಾಗಿ ಉಜಿರೆಯ ರೈನಥಾನ್; ನೂರಾರು ಸ್ಪರ್ಧಿಗಳು ಭಾಗಿ ; 5...

ಬೆಳ್ತಂಗಡಿ : ಮಾದಕ ವ್ಯವಸನ ಜನಜಾಗೃತಿಗಾಗಿ ಉಜಿರೆಯ ರೈನಥಾನ್; ನೂರಾರು ಸ್ಪರ್ಧಿಗಳು ಭಾಗಿ ; 5 ಕಿ.ಮೀ. ಮಳೆಯಲ್ಲಿ ಓಟ

spot_img
- Advertisement -
- Advertisement -

ಬೆಳ್ತಂಗಡಿ: ಮಾದಕ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಉಜಿರೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕ ರೈನಥನ್ ಕಾರ್ಯಕ್ರಮ ಜೂ.29 ರಂದು ಬೆಳಗ್ಗೆ 8 ಗಂಟೆಗೆ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.

ಮಂಗಳೂರು ವಿವಿ ಕುಲಪತಿ ಪ್ರೊ.ಧರ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ.ಎಲ್.ಸಿ.ಪ್ರತಾಪಸಿಂಹ ನಾಯಕ್, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ.ಪಿ.ವಿಶ್ವನಾಥ್, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಾಪುರ ಮಠ, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ ರಾವ್, ಎಸ್.ಡಿಎಂ.ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್., ವ್ಯಾಯಮ ಜಿಮ್ ನ ಶಿಶಿರ ರಘುಚಂದ್ರ ಉಪಸ್ಥಿತರಿದ್ದರು.

ಉಜಿರೆಯ ಸುತ್ತಮುತ್ತಲಿನ 5 ಗ್ರಾಮಗಳನ್ನೊಳಗೊಂಡು ಓಟದ ವ್ಯಾಪ್ತಿ ಮೀಸಲಿರಿಸಲಾಗಿತ್ತು. ಮಳೆಯನ್ನು ಅನುಭವಿಸಿ, ಸಂತೋಷ ಪಡುತ್ತಾ ಸ್ಪರ್ಧಿಗಳು ಓಟದಲ್ಲಿ ಭಾಗವಹಿಸಿದರು. ವ್ಯಾಯಾಮ ಫಿಟ್ನೆಸ್ ಮತ್ತು ಕ್ರಾಸ್ ಫಿಟ್ ಉಜಿರೆ, ರೋಟರಿ ಕ್ಲಬ್, ಬದುಕು ಕಟ್ಟೋಣ ಸಂಸ್ಥೆ ಹಾಗೂ ಇತರ ಸಂಘ-ಸಂಸ್ಥೆ ನೇತೃತ್ವದಲ್ಲಿ ರೈನಥಾನ್ ನಡೆಯಿತು. ಪ್ರಥಮ 10,000 ರೂ., ದ್ವಿತೀಯ 7,000 ರೂ., ತೃತೀಯ 5,000 ರೂ.  ಬಹುಮಾನದ ಜತೆಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಲಾಯಿತು. ರೈನಥಾನ್ ನಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟು ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟು ಸೇರಿದಂತೆ ಪುರುಷ ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ಆಯೋಜಿಸಲಾಗಿತ್ತು. ರೈನಥಾನ್ ನಲ್ಲಿ ವಿಶೇಷವಾಗಿ 5 ಕಿ.ಮೀ ಓಡಿ ಕ್ರಮಿಸಿದ ಉಜಿರೆ ನಿವಾಸಿ 75 ವರ್ಷದ ಲತಾ ಗೋರೆ ಅವರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ವ್ಯಾಯಮ ಫಿಟ್ನೆಸ್ ಮತ್ತು ಕ್ರಾಸ್ ಫಿಟ್ ಉಜಿರೆ ಇದರ ಮಾಲಕ ಶಿಶಿರ್ ರಘುಚಂದ್ರ, ಕಾಶಿ ಪ್ಯಾಲೇಶ್ ದಿ ಓಶಿಯನ್ ಪರ್ಲ್ ಮ್ಯಾನೇಜರ್ ಉದಯ್ ಶೆಟ್ಟಿ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು, ಹಿರಿಯ ನ್ಯಾಯವಾದಿ ಬಿ‌.ಕೆ. ಧನಂಜಯ್ ರಾವ್ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಡಿ.ಎಂ. ದೈಹಿಕ ಶಿಕ್ಷಣ ನಿರ್ದೇಶಕರು, ಶಿಕ್ಷಕರು, 200 ಕ್ಕೂ ಅಧಿಕ ಸ್ವಯಂ ಸೇವಕರೊಂದಿಗೆ ಅಚ್ಚುಕಟ್ಟಾಗಿ ರೈನಾಥಾನ್ ಕಾರ್ಯಕ್ರಮ ಸಂಯೋಜಿಸಲಾಯಿತು.

- Advertisement -
spot_img

Latest News

error: Content is protected !!