Monday, June 30, 2025
Homeಕರಾವಳಿಉಡುಪಿಯಾರೋ ಇಲ್ಲಿಗೆ ಬಂದು ನೀಡಿರುವ ಹೇಳಿಕೆಗೆ ನಾನು ಕಿವಿಗೊಡಬೇಕಿಲ್ಲ- ನನ್ನ ರಾಜೀನಾಮೆಯನ್ನು ಕೇಳುವುದಾದರೆ ‌ನನ್ನ ಕ್ಷೇತ್ರದ...

ಯಾರೋ ಇಲ್ಲಿಗೆ ಬಂದು ನೀಡಿರುವ ಹೇಳಿಕೆಗೆ ನಾನು ಕಿವಿಗೊಡಬೇಕಿಲ್ಲ- ನನ್ನ ರಾಜೀನಾಮೆಯನ್ನು ಕೇಳುವುದಾದರೆ ‌ನನ್ನ ಕ್ಷೇತ್ರದ ಜನತೆ ಕೇಳಲಿ: ಮಜೀದ್ ಹೇಳಿಕೆಗೆ ರಘುಪತಿ ಭಟ್ ತಿರುಗೇಟು

spot_img
- Advertisement -
- Advertisement -

ಉಡುಪಿ: ಬೆಂಕಿ ಹಚ್ಚಿ ತಮಾಷೆ ನೋಡುವವರಿಗೆ ನಾವು ಉತ್ತರ ಕೊಡಬೇಕಾಗಿಲ್ಲ, ನನ್ನ ರಾಜೀನಾಮೆಯನ್ನು ಕೇಳುವುದಾದರೆ ‌ನನ್ನ ಕ್ಷೇತ್ರದ ಜನತೆ ಕೇಳಲಿ ಎಂದು ಶಾಸಕ ರಘುಪತಿ ಭಟ್, ಎಸ್ ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಭಟ್, ” ಯಾರೋ ಇಲ್ಲಿಗೆ ಬಂದು ನೀಡಿರುವ ಹೇಳಿಕೆಗೆ ನಾನು ಕಿವಿಗೊಡಬೇಕಿಲ್ಲ. ಹೊರಗಿನಿಂದ ಬಂದು ನನ್ನ ಬಗ್ಗೆ ಟೀಕೆ ಮಾಡಿದವರಿಗೆ ನಾನು ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ. ಸಂಶಯವಿದ್ದರೆ ನಮ್ಮ ಕ್ಷೇತ್ರದ ಮುಸ್ಲಿಂ ಮತದಾರರಿದ್ದರೆ ಕೇಳಬಹುದು ಹಾಗೆಂದು ಎಸ್ಡಿಪಿಐ ಕೇಳಿ ಏನು ಆಗಬೇಕಿಲ್ಲ. ಅವರ ಸರ್ಟಿಫಿಕೇಟ್ ಅಗತ್ಯವೂ ಇಲ್ಲ. ಧರ್ಮದ ಆಚರಣೆ , ಧರ್ಮದ ಬಗ್ಗೆ ಎಲ್ಲೂ ಮಾತಾನಾಡಿಲ್ಲ. ತರಗತಿ ಒಳಗೆ ಕೇವಲ ಹಿಜಾಬ್ ತೆಗೆಯಲು ಮಾತ್ರ ಹೇಳಿದ್ದೇವೆ.

ಬೆಂಕಿ ಹಚ್ಚಿ ನಾವು ತಮಾಷೆ ನೋಡುವವರಿಗೆ ನಾವು ಉತ್ತರ ಕೊಡಬೇಕಾಗಿಲ್ಲ. ಉಡುಪಿ ಕ್ಷೇತ್ರದ 12 ಕಾಲೇಜುಗಳಲ್ಲಿ ಕೇಸರಿ ಶಾಲು ಹಾಕಿಲ್ಲ.‌ ನಾವು ಯಾರನ್ನೂ ಪ್ರಚೋದಿಸಿಲ್ಲ. ನನ್ನ ಕ್ಷೇತ್ರದವರೇ ಕಾರಣ ಕೊಟ್ಟು ರಾಜೀನಾಮೆಗೆ ನನ್ನ ಕ್ಷೇತ್ರದವರು ಕೇಳಲಿ ಎಂದು ಹೇಳಿದ್ದಾರೆ.

ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರ ಖಾಸಗಿ ದಾಖಲೆ ಮಾಡಿಲ್ಲ ಎಂದು‌‌ ಪತ್ರಕರ್ತ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಇದೊಂದು ಭಾವನಾತ್ಮಕ ವಿಚಾರ. ಮುಂದಿನ ಒಂದು ವಾರದಲ್ಲಿ ಕೋರ್ಟ್ ತೀರ್ಪು ಬರುವ ಸಾಧ್ಯತೆ ಇದೆ. ಆ 12 ಜನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದಾದರೆ ಸ್ವಾಗತಿಸುತ್ತೇವೆ. ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎನ್ನುವ ಕಾಳಜಿ‌ ನಮಗೂ‌ ಇದೆ. ಆದರೆ ಸಮವಸ್ತ್ರ ಸಂಹಿತೆ ಯನ್ನು ಪಾಲಿಸಬೇಕು. ಮಕ್ಕಳನ್ನು ರಾಜಕೀಯ ಷಡ್ಯಂತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎಲ್ಲದಕ್ಕಿಂತ ಮಕ್ಕಳ ಶಿಕ್ಷಣ ಮುಖ್ಯ, ಎಂದು ‌ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ನಗರ ಬಿಜೆಪಿ ಅದ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ವೀಣಾ ನಾಯಕ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!