Sunday, May 19, 2024
Homeಕರಾವಳಿಮುರುಡೇಶ್ವರ ನಿರ್ಮಾತೃ ಉದ್ಯಮಿ ಆರ್. ಎನ್ ಶೆಟ್ಟಿ ವಿಧಿವಶ: ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ

ಮುರುಡೇಶ್ವರ ನಿರ್ಮಾತೃ ಉದ್ಯಮಿ ಆರ್. ಎನ್ ಶೆಟ್ಟಿ ವಿಧಿವಶ: ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ

spot_img
- Advertisement -
- Advertisement -

ಬೆಂಗಳೂರು:  ಮುರುಡೇಶ್ವರದ ನಿರ್ಮಾತೃ ಉದ್ಯಮಿ ಆರ್. ಎನ್ ಶೆಟ್ಟಿ (93) ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಹೃದಯಾಘಾತ ದಿಂದ ಇಂದು ಬೆಳಗಿನ ಜಾವ 3-30 ಕ್ಕೆ ಅವರು ವಿಧಿವಶರಾಗಿದ್ದಾರೆ.

1928 ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರಡೇಶ್ವರದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ್ಪ ಶೆಟ್ಟಿ ರವರು ಮುರುಡೇಶ್ವರ ದಲ್ಲಿ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಮುರುಡೇಶ್ವರದ ಅಭಿವೃದ್ಧಿಗೆ ಕಾರಣರಾಗಿದ್ದರು.

ಮುರುಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು 1967 ರಲ್ಲಿ ಆರ್‌ಎನ್ ಶಟ್ಟಿ ಆಂಡ್ ಕಂಪನಿ ಪ್ರಾರಂಭಿಸಿದ್ದು ಕಟ್ಟಡ ನಿರ್ಮಾಣ,ಹೋಟಲ್ ಉದ್ಯಮ,ವೈದ್ಯಕೀಯ ರಂಗ,ಶಿಕ್ಷಣ ಕ್ಷೇತ್ರ ಸಮಾಜ ಸೇವೆಯ ಮೂಲಕ ದೇಶ ವಿದೇಶ ದಲ್ಲಿ ಹೆಸರು ಮಾಡಿದ್ದಾರೆ. ಇವರ ಸೇವೆ ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ 2009-10 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ಟೀಟ್ ಮಾಡಿ ಶೋಕ ವ್ಯಕ್ತಪಡಿಸಿದ್ದಾರೆ.

ಮೃತರು ಮೂರು ಜನ ಗಂಡು ಮಕ್ಕಳು,ನಾಲ್ಕು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ

- Advertisement -
spot_img

Latest News

error: Content is protected !!