- Advertisement -
- Advertisement -
ಪುತ್ತೂರು:ಪುತ್ತೂರು ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು , ಸಂಘದ ಅಧ್ಯಕ್ಷರಾಗಿ ಶ್ರವಣ್ ಕುಮಾರ್ ನಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಶ್ರವಣ್ ಕುಮಾರ್ ನಾಳ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಹೌದು…ಪುತ್ತೂರು ಪತ್ರಕರ್ತ ಸಂಘದ ನಾಮಫಲಕವನ್ನು ತುಳು ಲಿಪಿಯಲ್ಲಿ ಬರೆಯಲಾಗುವುದು ಎಂದು ಶ್ರವಣ್ ಕುಮಾರ್ ನಾಳ ಅವರು ಹೇಳಿದ್ದಾರೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಪತ್ರಕರ್ತ ಸಂಘವೊಂದರ ನಾಮಫಲಕ ತುಳು ಭಾಷೆಯಲ್ಲಿ ಇರಲಿದೆ.
ಇನ್ನು ಶ್ರವಣ್ ಕುಮಾರ್ ನಾಳ ಅವರ ಈ ಘೋಷಣೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತುಳು ಭಾಷೆಯ ಹಿರಿಮೆಯನ್ನು ಇಂದು ಇನ್ನಷ್ಟು ಹೆಚ್ಚಿಸಲಿದೆ.
- Advertisement -