Sunday, May 5, 2024
Homeಕರಾವಳಿಪುತ್ತೂರಿನಲ್ಲಿ ಯುವತಿಯನ್ನು ಯುವಕ ಕೊಲೆಗೈದ ಪ್ರಕರಣ; ವಿಚಾರಣೆ ವೇಳೆ ಕೊಲೆಗೈದ ಪಾಪಿ ಬಾಯ್ಬಿಟ್ಟಿದ್ದಾನೆ ಹಲವು ಭಯಾನಕ...

ಪುತ್ತೂರಿನಲ್ಲಿ ಯುವತಿಯನ್ನು ಯುವಕ ಕೊಲೆಗೈದ ಪ್ರಕರಣ; ವಿಚಾರಣೆ ವೇಳೆ ಕೊಲೆಗೈದ ಪಾಪಿ ಬಾಯ್ಬಿಟ್ಟಿದ್ದಾನೆ ಹಲವು ಭಯಾನಕ ಸತ್ಯ

spot_img
- Advertisement -
- Advertisement -

ಪುತ್ತೂರಿನಲ್ಲಿ ಯುವತಿಯನ್ನು ಯುವಕ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಕೊಲೆಗೈದ ಪಾಪಿ ಹಲವು ಭಯಾನಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ.

ತನಿಖೆಯ ವೇಳೆ ಕೊಲೆಯಾದ ಗೌರಿ ಮತ್ತು ಕೊಲೆಗಾರ ಪದ್ಮರಾಜ್‌ ಕಳೆದ 6 ವರ್ಷಗಳಿಂದ ಪರಿಚಿತರಾಗಿದ್ದರು ಎಂದು ತಿಳಿದು ಬಂದಿದೆ. ಗೌರಿ ಬಂಟ್ವಾಳ ತಾಲೂಕಿನ ವಿಟ್ಲದ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ ಪದ್ಮರಾಜನ ಪರಿಚಯವಾಗಿತ್ತು.ಬಳಿಕ ಪರಿಚಯ ಪ್ರೀತಿಗೆ ತಿರುಗಿತ್ತು.ಈ ಮೊದಲು ಅವರೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು.2020ರಲ್ಲಿ ಗೌರಿ ಪದ್ಮರಾಜನ ವಿರುದ್ದ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು‌.

ಈ ಸಂದರ್ಭದಲ್ಲಿ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು.ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು.ಈ ಮಧ್ಯೆ ಪದ್ಮರಾಜ್‌ ಗೌರಿಗೆ ಮೊಬೈಲ್‌ ಪೋನ್‌ ಒಂದನ್ನು ಕೊಡಿಸಿದ್ದನು.ಆದರೆ ಮತ್ತೆ ಇತ್ತೀಚೆಗೆ ಅವರೊಳಗೆ ಮತ್ತೆ ಭಿನ್ನಾಭಿಪ್ರಾಯ ಬಂದು ಆತನ ಪ್ರೀತಿಯನ್ನು ಗೌರಿ ನಿರಾಕರಿಸಿದ್ದಳು.

ಈ ಹಿನ್ನೆಲೆಯಲ್ಲಿ ಗುರುವಾರ ಆತ ಬೈಕಿನಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿಗೆ ತೆರಳಿ ಈ ಹಿಂದೆ ಗಿಫ್ಟ್‌ ಕೊಟ್ಟಿದ್ದ ಮೊಬೈಲನ್ನು ಆಕೆಯ ಬ್ಯಾಗಿನಿಂದ ಕಿತ್ತುಕೊಂಡು ಹೋಗಿದ್ದನು.ಬಳಿಕ ಆಕೆ ಪೋನ್‌ ಕರೆ ಮಾಡಿ ತನ್ನ ಮೊಬೈಲ್‌ ಫೋನ್‌ ಹಿಂತಿರುಗಿಸುವಂತೆ ಕೇಳಿದ್ದಳು‌. ಆತ ವಾಪಸ್‌ ಬರಲು ಒಪ್ಪಿದ್ದರಿಂದ ಗೌರಿ ಮಹಿಳಾ ಪೊಲೀಸ್‌ ಠಾಣೆ ಬಳಿ ತೆರಳಿ ಆತನಿಗಾಗಿ ಕಾಯುತ್ತಿದ್ದಳು.ಬೈಕಲ್ಲಿ ಬಂದ ಪದ್ಮರಾಜ್‌ ಮತ್ತೆ ಗೌರಿ ಮಧ್ಯೆ ವಾಗ್ವಾದ ನಡೆದಿದೆ ಹಾಗೂ ಈ ಸಂದರ್ಭ ಪದ್ಮರಾಜ್ ಚೂರಿಯಿಂದ ಗೌರಿಯ ಕುತ್ತಿಗೆಗೆ ಇರಿದಿದ್ದಾನೆ.

ಈ ಸಂದರ್ಭ ಗೌರಿ ನೆಲಕ್ಕೆ ಕುಸಿದು ಬಿದ್ದು ಒದ್ದಾಡುತ್ತಿದ್ದಾಗ ಮತ್ತೆ ನಾಲ್ಕೈದು ಬಾರಿ ಕತ್ತನ್ನು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಮೊದಲು ಫ್ಯಾನ್ಸಿ ಅಂಗಡಿಯಲ್ಲಿ ಆತ ಆಕೆಯ ಜತೆ ಜಗಳ ಮಾಡಿರುವ ಕುರಿತಂತೆ ಸಿಸಿ ಕ್ಯಾಮರಾ ದೃಶ್ಯಾವಳಿ ಇದೀಗ ಪತ್ತೆಯಾಗಿದ್ದು ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!