- Advertisement -
- Advertisement -
ಪುತ್ತೂರು : ಸದ್ಯ ಕರಾವಳಿಯಲ್ಲಿ ನವರಾತ್ರಿ ಸಂಭ್ರಮ ಎಲ್ಲಿ ನೋಡಿದರೂ ಬರೀ ಹುಲಿ ವೇಷಗಳದ್ದೇ ಸದ್ದು. ತಾಸೆಯ ಸದ್ದು ಕೇಳಿದ್ರೆ ಸಾಕು ಎಂತಹವರಿಗಾದ್ರೂ ಸರಿ ಒಮ್ಮೆಲೇ ಕುಣಿದು ಬಿಡೋಣ ಅಂತಾ ಅನ್ಸುತ್ತೆ. ಅದೇ ರೀತಿ ತಾಸೆ ಬಡಿತಕ್ಕೆ ಹುಲಿ ವೇಷಗಳೊಂದಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹೆಜ್ಜೆ ಹಾಕಿದ್ದಾರೆ.
ಪುತ್ತೂರು ಮಿನಿ ವಿಧಾನಸೌಧದ ಮುಂದೆ ಅಧಿಕಾರಿಗಳು ಹಾಗೂ ಶಾಸಕರ ನೇತೃತ್ವದಲ್ಲಿ ಹುಲಿ ವೇಷಧಾರಿಗಳ ಕುಣಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹುಲಿ ವೇಷಧಾರಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಶಾಸಕರೂ ಹುಲಿ ಹೆಜ್ಜೆ ಹಾಕಿ ಮನೋರಂಜನೆ ನೀಡಿದ್ದಾರೆ. ಶಾಸಕರಿಗೆ ಸಾರ್ವಜನಿಕರೂ ಸಾಥ್ ನೀಡಿದ್ದಾರೆ.
- Advertisement -