- Advertisement -


- Advertisement -
ಪುತ್ತೂರು; ಉಪ್ಪಿನಂಗಡಿಯ ಕೋಡಿಂಬಾಡಿ ಸರಕಾರಿ ಹಿ ಪ್ರಾ ಶಾಲಾ ಬಳಿ ರಸ್ತೆಯಲ್ಲೇ ಮಳೆಯ ನೀರು ಹರಿಯುತ್ತಿದ್ದರಿಂದ ವಾಹನ ಸವಾರರಿಗೆ ಸಂಚರಿಸೋದಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗಮನಿಸಿದ್ದು ಕೂಡಲೇ ಕಾರು ನಿಲ್ಲಿಸಿ, ಪಕ್ಕದ ಮನೆಯೊಂದರಿಂದ ಹಾರೆ ತರಿಸಿ ಬ್ಲಾಕ್ ಆಗಿದ್ದ ಕಣಿಯನ್ನು ಸ್ವಚ್ಛ ಮಾಡಿ ಸರಾಗವಾಗಿ ನೀರು ಹರಿಯುವಂತೆ ಮಾಡಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
- Advertisement -


