- Advertisement -
- Advertisement -
ಬೈಂದೂರು : ಎರಡು ಪ್ರತ್ಯೇಕ ಅಪಘಾತದಲ್ಲಿ ಎರಡು ದನಗಳು ಭೀಕರವಾಗಿ ಸಾವನ್ನಪ್ಪಿತ್ತು. ಈ ಘಟನೆ ತಾಲೂಕಿನ
ಯಡ್ತರೆ ಸಮೀಪದ ರಾಹುತನಕಟ್ಟೆ ಹಾಗೂ ನಾಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿತ್ತು.
ಆದರೆ ರಾತ್ರಿ ಮೃತಪಟ್ಟ ದನವನ್ನು ಮಧ್ಯಾಹ್ನದವರೆಗೂ ಹಾಗೆ ರಸ್ತೆಯಲ್ಲಿ ಬಿಟ್ಟಿದ್ದರು.ಜನರು ಇದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲಕಾಲ ಹೆದ್ದಾರಿಯಲ್ಲಿ ಪ್ರತಿಭಟನೆಯೂ ನಡೆದಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ ದನವನ್ನು ಅಡ್ಡವಿರಿಸಿ ಪ್ರತಿಭಟನೆ ಮಾಡಲಾಗಿತ್ತು. ಬಳಿಕ ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಐ ಆರ್ ಬಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ರಸ್ತೆ ಪಕ್ಕದಲ್ಲಿ ಎರಡು ದನಗಳನ್ನು ಹೂತು ಹಾಕಿದ್ದಾರೆ
- Advertisement -