- Advertisement -
- Advertisement -
ಉಡುಪಿ :ರಾತ್ರಿ ವೇಳೆ ಅಸಹಾಯಕರಾಗಿ ನೊಂದಿರುವ ಮಹಾರಾಷ್ಟ್ರ ಮೂಲದ ಯುವತಿಯನ್ನು ಅಂಬಲಪಾಡಿಯ ವಿಶು ಶೆಟ್ಟಿ ಯವರು ಅಲೆವೂರು ಚಿಟ್ಪಾಡಿಯ ನಿರ್ಜನ ಪ್ರದೇಶದಿಂದ ರಕ್ಷಿಸಿ ನಗರದ ಪೋಲಿಸ್ ಠಾಣಾ ಸಹಾಯದಿಂದ ಸಖಿ-ಒನ್-ಸ್ಟಾಪ್ ಸೆಂಟರ್ಗೆ ದಾಖಲಿಸಿರುವ ಘಟನೆ ನಡೆದಿದೆ.
ಯುವತಿ ಮೀನಾ (26 ) ಮಹಾರಾಷ್ಟ್ರ ಮೂಲದವಳೆಂಬ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ ಲಭ್ಯವಿಲ್ಲ.ಯುವತಿ ಬರೀ ಕಾಲ್ನಡಿಗೆಯಲ್ಲಿ ನಡೆದು ಸುಸ್ತಾಗಿದ್ದಳು. ರಕ್ಷಣಾ ಸಮಯ ತುರ್ತು ಆಹಾರ ನೀಡಲಾಗಿ ಆರೈಕೆ ಮಾಡಲಾಯಿತು. ರಾತ್ರಿಯೇ ರಕ್ಷಣೆಯಾಗಿರುವುದರಿಂದ ಸಂಭಾವ್ಯ ದುರಂತವು ತಪ್ಪಿದೆ. ಸಂಬಂಧಿಕರು ಇದ್ದಲ್ಲಿ ನಗರ ಠಾಣೆ ಅಥವಾ ಸಖಿ-ಒನ್-ಸ್ಟಾಪ್ ಸೆಂಟರ್ ಗೆ ಸಂಪರ್ಕಿಸಬೇಕಾಗಿ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಮರ್ಣೆ ಪಂಚಾಯತ್ ಸದಸ್ಯರಾದ ಪ್ರಜ್ಪಲ್ ಹೆಗ್ಡೆ ಹಾಗೂ ಮಹಿಳಾ ಪೋಲಿಸ್ ರೂಪ ರವರು ಸಹಕರಿಸಿದರು.
- Advertisement -