- Advertisement -
- Advertisement -
ಕಾಸರಗೋಡು: ಜ್ಯೂಸ್ ನ ರುಚಿ ಹೆಚ್ಚಿಸಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಜ್ಯೂಸ್ ನಲ್ಲಿ ನಿಷೇಧಿತ ಪಾನ್ ಮಸಾಲ ಉತ್ಪನ್ನ ಬೆರೆಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅಂಗಡಿ ಮಾಲೀಕನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಮೀನಾಫೀಸ್ ಕಡಪ್ಪುರದ ಅಬ್ದುಲ್ ಸತ್ತಾರ್(48) ಬಂಧಿತ ಆರೋಪಿ. ನಿನ್ನೆ ರಾತ್ರಿ ಡಿವೈಎಸ್ಪಿ ಪಿ.ಪಿ.ಬಾಲಕೃಷ್ಣ ನ್ ನೇತೃತ್ವದ ಪೊಲೀಸ್ ತಂಡ ತಪಾಸಣೆ ನಡೆಸಿದ್ದು, ಅಂಗಡಿಯಿಂದ ನಿಷೇಧಿತ ಪಾನ್ ಉತ್ಪನ್ನವನ್ನು ವಶಪಡಿಸಿಕೊಂಡಿದೆ.
- Advertisement -