Saturday, April 27, 2024
Homeಕರಾವಳಿಬೆಳ್ತಂಗಡಿ:ಆನ್ ಲೈನ್ ದೇಶ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ; ಹಾಡು ಹಾಡಿ...

ಬೆಳ್ತಂಗಡಿ:ಆನ್ ಲೈನ್ ದೇಶ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ; ಹಾಡು ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದ ಶಾಸಕ ಹರೀಶ್ ಪೂಂಜಾ!

spot_img
- Advertisement -
- Advertisement -

ಬೆಳ್ತಂಗಡಿ: ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಬೆಳ್ತಂಗಡಿಯ ಜನತೆಗೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಆಯೋಜಿಸಿದ್ದ ಆನ್ ಲೈನ್ ದೇಶ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಏರ್ಪಡಿಸಲಾಗಿತ್ತು.

ಒಂದರಿಂದ 5 ವರ್ಷ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನವು ವೋಮ್ ನಿಹಾಲ್ ಜೈನ್, ದ್ವಿತೀಯ ಬಹುಮಾನವು ಶ್ರವಣ್, ಬಾಲಕಿಯರ ವಿಭಾಗದಲ್ಲಿ ಬಹುಮಾನವು ಪ್ರಥಮ ಅನಘ ಎಸ್.ಕೆ.,ದ್ವಿತೀಯ: ತನ್ವಿ ಆರ್.ಜೆ ತಮ್ಮದಾಗಿಸಿಕೊಂಡಿದ್ದಾರೆ.

5ರಿಂದ 10 ವರ್ಷ ವಿಭಾಗದಲ್ಲಿ ಪ್ರಥಮ ಬಹುಮಾನವು ವರ್ಚಸ್, ದ್ವಿತೀಯ ಬಹುಮಾನವು ರಿಶೋನ್ ಲಾರೆನ್ಸ್, ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನವು ಸ್ಫೂರ್ತಿ ದ್ವಿತೀಯ ಬಹುಮಾನವು ಶ್ರೀರಕ್ಷ ಎಂ. ಪಡೆದುಕೊಂಡಿದ್ದಾರೆ.

10ರಿಂದ 20 ವರ್ಷ ವಿಭಾಗದಲ್ಲಿ ಪ್ರಥಮ ಬಹುಮಾನವು ಸುನೀಲ್, ದ್ವಿತೀಯ ಬಹುಮಾನವುರಕ್ಷಣ್ ಜಿ.ರಾವ್, ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವು ದಿಶಾ, ದ್ವಿತೀಯ ಬಹುಮಾನವು ವಿಭಾ ನಾಯಕ್ ಪಡೆದುಕೊಂಡಿದ್ದಾರೆ.

20ರಿಂದ 40 ವರ್ಷ ವಿಭಾಗದಲ್ಲಿ ಪ್ರಥಮ ಬಹುಮಾನವು ಅಭಿಷೇಕ್, ದ್ವಿತೀಯ ಬಹುಮಾನವು ಸಂತೋಷ್ ಕುಮಾರ್, ಯುವತಿಯರ ವಿಭಾಗದಲ್ಲಿ ಪ್ರಥಮ ಬಹುಮಾನವು ಅನನ್ಯಾ ಭಟ್, ದ್ವಿತೀಯ ಬಹುಮಾನವು ಕಾವ್ಯಶ್ರೀ ತಮ್ಮದಾಗಿಸಿಕೊಂಡಿದ್ದಾರೆ.

40 ವರ್ಷದಿಂದ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವು ಭಗೀರಥ್ ನಾಯಕ್, ದ್ವಿತೀಯ ಬಹುಮಾನವು ಗೋಡ್ರಿನ್ ಸ್ಟೀಫನ್ ಲೂಯಿಸ್,ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವು ಲಲಿತಾ ನೆರಿಯ, ದ್ವಿತೀಯ ಬಹುಮಾನವು ಮಮತಾ ವಿ.ಭಟ್,ಪಡೆದುಕೊಂಡಿದ್ದಾರೆ.


ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 10,000, ದ್ವಿತೀಯ ಬಹುಮಾನವಾಗಿ 5,000 ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗಿದೆ.

ಸ್ಪರ್ಧೆಯ ಆಯೋಜಕರಾದ, ಶಾಸಕ ಹರೀಶ್ ಪೂಂಜ ಮಾತನಾಡಿ, ಈ ಸ್ಪರ್ಧೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ಯುವ ಮತ್ತು ಹಿರಿಯ ಪ್ರತಿಭೆಗಳನ್ನು ಮುಂದೆ ತರುವ ಪ್ರಯತ್ನವನ್ನು ನಾವು ಮಾಡಿದ್ದೆವು. ಇಂತಹ ಪ್ರಯತ್ನ ನಡೆದದ್ದು ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಎಂದರು.

ಒಟ್ಟು 15 ಮಂದಿ ತೀರ್ಪುಗಾರರಾಗಿದ್ದರು. ಅಂತಿಮ ಹಂತದಲ್ಲಿ ಖ್ಯಾತ ಗಾಯಕರಾದ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಜೀ ಕನ್ನಡ ಸರಿಗಮಪ ಜ್ಯೂರಿ ಸದಸ್ಯೆ ಮಾಲಿನಿ ಕೇಶವ ಪ್ರಸಾದ್ ತೀರ್ಪು ನೀಡಿದ್ದರು.

ರಾಜ್ಯಾದ್ಯಂತ 5,000 ಕ್ಕೂ ಮಿಕ್ಕಿ, ಬೆಳ್ತಂಗಡಿ ತಾಲೂಕಿನಿಂದಲೇ 3,500 ಮಂದಿ ಸ್ಪರ್ಧಿಗಳು ಭಾಗವಹಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ ಪ್ರಶಸ್ತಿಗೆ ಈ ಸ್ಪರ್ಧೆ ಭಾಜನವಾಗಿತ್ತು.

ಸ್ಪರ್ಧೆಯ ಸಂಯೋಜಕರಾಗಿ ಸಿನಿಮಾ ನಿರ್ದೇಶಕ ಸ್ಮಿತೇಶ್ ಬಾರ್ಯ, ಪ್ರಶಾಂತ್ ಶೆಟ್ಟಿ ಕರಂಬಾರು, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಹಾಗೂ ದಿನೇಶ್ ಕೋಟ್ಯಾನ್ ಸಹಕರಿಸಿದ್ದರು.



ಖ್ಯಾತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ, ಖ್ಯಾತ ಗಾಯಕಿ ಮಾಲಿನಿ ಕೇಶವ ಪ್ರಸಾದ್ ತಂಡದವರು ಹಾಗೂ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ದೇಶ ಭಕ್ತಿಗೀತೆಯನ್ನು ಹಾಡುವ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು. ಅದಲ್ಲದೆ ಶಾಸಕ ಹರೀಶ್ ಪೂಂಜ ಕೂಡ ಹಾಡೊಂದನ್ನು ಹಾಡುವ ಮೂಲಕ ತಾನೂ ಕೂಡ ಉತ್ತಮ ಹಾಡುಗಾರ ಎಂಬುವುದನ್ನು ನಿರೂಪಿಸಿದರು.

ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಸದಸ್ಯ ಲೋಕೇಶ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ ನಾವೂರು, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬಂಗಾಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲ್ಯಾನ್, ಉದ್ಯಮಿ ರಾಜೇಶ್ ಪೈ ಉಜಿರೆ, ಮತ್ತಿತರರು ಉಪಸ್ಥಿತರಿದ್ದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಆನ್ ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಡೆದ ಭಕ್ತಿ ರಸಮಂಜರಿಯಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಅವರ ತಂಡದಲ್ಲಿ ಕೀಬೋರ್ಡ್ ನಲ್ಲಿ ಗುರು ಮಂಗಳೂರು, ರಿದಂ ನಲ್ಲಿ ವಾಮನ ಕುಮಾರ್, ತಬಲದಲ್ಲಿ ಅಶೋಕ್ ಕಾಸರಗೋಡು, ಗಿಟಾರ್ ನಲ್ಲಿ ಶರತ್ ಹಳೆಯಂಗಡಿ ಹಾಗೂ ಕೊಳಲು ವಾದನದಲ್ಲಿ ಅಭಿಷೇಕ್ ಸಹಕರಿಸಿದರು.ಇವರಿಗೆ ಸ್ವೀಕೃತಿ ಹರೀಶ್ ಪೂಂಜ ಸ್ಮರಣಿಕೆ ನೀಡಿ ಗೌರವಿಸಿದರು. ಅಭೂತ ಪೂರ್ವ ಅನ್ ಲೈನ್ ದೇಶ ಭಕ್ತಿ ಗೀತೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿಜೇತರಾದವರಿಗೆ ಹಾಗೂ ಕಾರ್ಯಕ್ರಮ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ಸಹಕಾರ ನೀಡಿದ ಪ್ರಶಾಂತ್ ಶೆಟ್ಟಿ ಕರಂಬಾರು, ಅನೀಶ್ ಅಮೀನ್ ,ಸ್ಮಿತೇಶ್ ಬಾರ್ಯ, ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತಾಲೂಕಿನ ಶಾಸಕನ ನೆಲೆಯಲ್ಲಿ ಧನ್ಯವಾದಗಳನ್ನು ಶಾಸಕ ಹರೀಶ್ ಪೂಂಜ ಸಲ್ಲಿಸಿದರು.

ಬಹುಮಾನ ಗೆದ್ದ ನಗದನ್ನು ದೇಣಿಗೆ ನೀಡಿದ ವಿಜೇತೆ

ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗೆದ್ದ ಮಮತ. ವಿ. ಭಟ್ ತನಗೆ ಬಂದ ದ್ವಿತೀಯ ಬಹುಮಾನದ ನಗದು ರೂ 5000 ವನ್ನು ಶಾಸಕರ ಸಮ್ಮುಖದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ದೇಣಿಗೆ ನೀಡುವುದಾಗಿ ಘೋಷಿಸಿದರು

- Advertisement -
spot_img

Latest News

error: Content is protected !!